ಮೈಸೂರು: ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುದ್ಧ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಮೈಸೂರು ಜಿಲ್ಲೆ ಸರಗೂರಿನ ಸಮೀಪದ ಮೈಸೂರು ಜಿಲ್ಲೆಯ ಗಡಿಭಾಗದ ಯಶವಂತಪುರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮೂರು ಅಡಿ ಎತ್ತರದ ಕಂಚಿನ ಬುದ್ದ ಪ್ರತಿಮೆ ಅನಾವರಣಗೊಂಡಿದೆ. ಚಾಮರಾಜನಗರ ಜಿಲ್ಲೆಯ ಭೋದಿ ಬಂತೇಜಿರವರು ಗೌತಮ ಬುದ್ಧರ ವಿಚಾರಗಳನ್ನು ಬೋಧಿಸುವ ಮೂಲಕ ಪ್ರತಿಷ್ಠಾಪಿಸಿದರು.
ಬುದ್ಧನ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು ಬುದ್ಧರ ಮಾರ್ಗದಲ್ಲಿ ನಡೆದು ದೇಶಕ್ಕೆ ಬೆಳಕಾಗಬೇಕು ಎಂದು ಬೋಧಿ ಬಂತೆಜಿ ಸಂದೇಶ ನೀಡಿದರು. ಹುಣಸೂರು ಮೂಲದ ಶೈಲಜಾ ಮಹದೇವಸ್ವಾಮಿ ದಾನಿಗಳು ಬೆಲೆಬಾಳು ಬುದ್ಧ ಮೂರ್ತಿಯನ್ನು ಕೊಡುಗೆಯಾಗಿ ನೀಡಿದರು. ಯಶವಂತಪುರ ಗ್ರಾಮದ ದೊಡ್ಡ ಯಜಮಾನರಾದ ನಿವೃತ್ತ ಪೊಲೀಸ್ ಅಧಿಕಾರಿ ಮರಿಸ್ವಾಮಿ, ಚಿಕ್ಕ ಯಜಮಾನರಾದ ಮಲ್ಲೇಶ್ ಯುಮೇನ್ ರೈಟ್ಸ್ ತಾಲೂಕು ಅಧ್ಯಕ್ಷರಾದ ಯಶವಂತಪುರ ಶ್ರೀನಿವಾಸ್ ಗ್ರಾ. ಪಂ.ಸದಸ್ಯ ಶಿವಲಿಂಗಯ್ಯ ಗ್ರಾಮದ ಎಲ್ಲಾ ಸಾರ್ವಜನಿಕರು ಒಮ್ಮತದಿಂದ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಬುದ್ಧ ಪ್ರತಿಮೆ ಸ್ಥಾಪಿಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಹೆಚ್. ಡಿ ಕೋಟೆ ಮತ್ತು ಸರಗೂರು ತಾಲ್ಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು ವಿಚಾರವಾದಿಗಳು, ಯಶವಂತಪುರ ಗ್ರಾಮದ ಮಹಿಳೆಯರು ಮಕ್ಕಳು ಗ್ರಾಮಸ್ಥರು ಭಾಗವಹಿಸಿ, ಸಂಭ್ರಮಿಸಿದರು.