ಸಾಲಿಗ್ರಾಮ: ಪಟ್ಟಣದಲ್ಲಿ ತಾಲ್ಲೂಕು ಸವಿತ ಸಮಾಜದ ವತಿಯಿಂದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಜಯಂತಿಯ ಅಂಗವಾಗಿ ಪಟ್ಟಣದ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶ್ರೀ ಹಡಪದ ಅಪ್ಪಣ್ಣ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಪಟ್ಟಣದ ಮಹಾವೀರ ರಸ್ತೆಯಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರವನ್ನು ಹಿಡಿದು ವಿವಿಧ ಘೋಷಣೆಗಳನ್ನು ಕೂಗುತ್ತಾ ಸಾಗುವ ಮೂಲಕ ಜಯಂತೋತ್ಸವನ್ನು ಸರಳವಾಗಿ ಆಚರಿಸಿದರು.
ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಆರ್.ಪ್ರಕಾಶ್, ಬಲರಾಂ, ಗಂಗಾಧರ್, ಸಾಲಿಗ್ರಾಮ ತಾಲ್ಲೂಕು ಸವಿತಾ ಸಮಾಜದ ಗೌರವಾಧ್ಯಕ್ಷ ಕೇಶವಮೂರ್ತಿ, ಅಧ್ಯಕ್ಷ ಎಸ್.ಕೆ.ರವಿ, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎಸ್.ಬಿ.ಹರೀಶ್, ಸಹ ಕಾರ್ಯದರ್ಶಿ ಎಂ.ಡಿ.ಗಿರೀಶ್, ಖಜಾಂಚಿ ರಾಜೇಶ್, ಸಹ ಖಜಾಂಚಿ ಸಂತೋಷ್, ಸದಸ್ಯರಾದ ಚನ್ನಯ್ಯ, ರಾಜಣ್ಣ, ಬೇಲೂರಯ್ಯ, ರಮೇಶ್, ಪಾಪಣ್ಣ, ಸುಕೇಶ್, ಎಂ.ಡಿ.ವಿಜಯ್, ರೇವಣ್ಣ, ಪುನೀತ್, ಸೋಮಶೇಖರ್, ನಟೇಶ್, ಮಂಜು, ಪ್ರಕಾಶ್, ಅರುಣ್, ಗೋವಿಂದರಾಜು, ಎಸ್.ಆರ್.ಸಂತೋಷ್, ಸೋಮು, ಮಹಾದೇವ, ಗಜೇಂದ್ರ, ಮಿರ್ಲೆ ಗೋಪಿ, ಅಭಿ. ವಿನಯ್, ಪ್ರದೀಪ್, ಹೇಮಂತ್, ರಾಜಯ್ಯ, ಮಂಜಯ್ಯ, ಜಗದೀಶ್, ರವಿ, ಮೂಡಲಬೀಡು ಮಂಜು ಸೇರಿದಂತೆ ಹಲವರು ಇದ್ದರು.