News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ: ಪುನಶ್ಚೇತನ ಕೇಂದ್ರ ಸೇವಾಧಾಮದ ನಿರ್ವಹಣೆಗೆ ಆರ್ಥಿಕ ನೆರವು ಕೋರಿ ಮನವಿ

Request for financial assistance for maintenance of rehabilitation centre sevadhama
Photo Credit :

ಬೆಳ್ತಂಗಡಿ: ಸೌತಡ್ಕದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ “ಸೇವಾಧಾಮ ” ದ ನಿರ್ವಹಣೆಗೆ ಆರ್ಥಿಕ ನೆರವು ನೀಡುವಂತೆ ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಅವರು ಕರ್ಣಾಟಕ ಬ್ಯಾಂಕ್ ಎಂ .ಡಿ. ಮತ್ತು ಸಿ ಇ ಓ ಮಹಾಬಲೇಶ್ವರ ಎಂ. ಎಸ್ . ಅವರನ್ನು  ಉಜಿರೆಯ ಸಿರಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಭೇಟಿಯಾಗಿ ಸೇವಾಧಾಮದ ಕಾರ್ಯಚಟುವಟಿಕೆ ಬಗೆಗೆ ವಿಸ್ತೃತ ಮಾಹಿತಿ ನೀಡಿ ಮನವಿ ಸಲ್ಲಿಸಿದರು.

ಮಹಾಬಲೇಶ್ವರ ಎಂ. ಎಸ್ .ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸೇವಾಧಾಮದ ಸಮಾಜಮುಖಿ ಸೇವಾಕಾರ್ಯದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕರ್ನಾಟಕ ಬ್ಯಾಂಕ್ ವತಿಯಿಂದ ಸಿ ಎಸ್ ಆರ್ ಯೋಜನೆಯನ್ವಯ ಸೇವಾಧಾಮದ ವಾರ್ಷಿಕ ನಿರ್ವಹಣೆಯ ಪರಿಕರ ಸಾಮಗ್ರಿಗಳನ್ನು ಒದಗಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್ .ಜನಾರ್ದನ್,ಸೇವಾಧಾಮದ ಸಿಬ್ಬಂದಿಗಳಾದ ಮನು ಮತ್ತು ಜೋಸ್ಫಿನಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು