ಬೆಳ್ತಂಗಡಿ: ಸೌತಡ್ಕದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರ “ಸೇವಾಧಾಮ ” ದ ನಿರ್ವಹಣೆಗೆ ಆರ್ಥಿಕ ನೆರವು ನೀಡುವಂತೆ ಸೇವಾಭಾರತಿ ಅಧ್ಯಕ್ಷ ಕೆ.ವಿನಾಯಕ ರಾವ್ ಅವರು ಕರ್ಣಾಟಕ ಬ್ಯಾಂಕ್ ಎಂ .ಡಿ. ಮತ್ತು ಸಿ ಇ ಓ ಮಹಾಬಲೇಶ್ವರ ಎಂ. ಎಸ್ . ಅವರನ್ನು ಉಜಿರೆಯ ಸಿರಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಭೇಟಿಯಾಗಿ ಸೇವಾಧಾಮದ ಕಾರ್ಯಚಟುವಟಿಕೆ ಬಗೆಗೆ ವಿಸ್ತೃತ ಮಾಹಿತಿ ನೀಡಿ ಮನವಿ ಸಲ್ಲಿಸಿದರು.
ಮಹಾಬಲೇಶ್ವರ ಎಂ. ಎಸ್ .ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸೇವಾಧಾಮದ ಸಮಾಜಮುಖಿ ಸೇವಾಕಾರ್ಯದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕರ್ನಾಟಕ ಬ್ಯಾಂಕ್ ವತಿಯಿಂದ ಸಿ ಎಸ್ ಆರ್ ಯೋಜನೆಯನ್ವಯ ಸೇವಾಧಾಮದ ವಾರ್ಷಿಕ ನಿರ್ವಹಣೆಯ ಪರಿಕರ ಸಾಮಗ್ರಿಗಳನ್ನು ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್ .ಜನಾರ್ದನ್,ಸೇವಾಧಾಮದ ಸಿಬ್ಬಂದಿಗಳಾದ ಮನು ಮತ್ತು ಜೋಸ್ಫಿನಾ ಉಪಸ್ಥಿತರಿದ್ದರು.