News Karnataka Kannada
Thursday, May 02 2024
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

Several leaders join JD(S) in H.D. Kote
Photo Credit : By Author

ಎಚ್.ಡಿ.ಕೋಟೆ: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಜೆಡಿಎಸ್ ಘಟಕದಿಂದ ನಡೆದ ಪಂಚರತ್ನ ಸಮಾವೇಶದಲ್ಲಿ ಹಲವು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಮಾಜಿ ಪ್ರಧಾನ ಎಂ.ಸಿ.ದೊಡ್ಡನಾಯ್ಕ, ವೀರಶೈವ ಸಮಾಜದ ಹಿರಿಯ ಮುಖಂಡ ಮುತ್ಸದಿ ರಾಜಕಾರಣಿ ಮಾಜಿ ಜಿ,ಪಂ.ಸದಸ್ಯ ಹೆಚ್.ಸಿ.ಶಿವಣ್ಣ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸುರೇಂದ್ರ ಡಿ.ಗೌಡ, ಸರಗೂರು ತಾಲ್ಲೂಕು ವೀರಶೈವ ಸಮಾಜದ ಮುಖಂಡ ಹೋಟೇಲ್ ಉದ್ಯಮಿ ಮೋಹನ್ ನಂಜುಂಡಪ್ಪ ಕಾಂಗ್ರೆಸ್ ಪಕ್ಷ ತೊರೆದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಳೆದ ನಾಲ್ಕು ತಿಂಗಳಿಂದ ರಾಜ್ಯದ ಉದ್ದಗಲಕ್ಕೂ ಪ್ರತಿನಿತ್ಯ ಪ್ರವಾಸ ಕೈಗೊಂಡು ಜನರ ಸಂಕಷ್ಟ ಅಲಿಸಿದ್ದೇನೆ, ನನ್ನ ರೈತ ಬಂದುಗಳು ಬಡವರ ನೋವನ್ನು ಕಂಡಿದ್ದೇನೆ, ರಾಜ್ಯದ ಜನತೆ, ರೈತರು, ಯುವಕರು ಮಹಿಳೆಯರು ನೆಮ್ಮದಿಯಿಂದ ಸಂತೃಪ್ತಿ ಜೀವನ ನಡೆಸಲು ಶಾಶ್ವತ ಯೋಜನೆಗಳನ್ನು ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಜಾರಿ ಮಾಡುತ್ತೇನೆ, ಒಂದು ಭಾರಿ ಸ್ಪಷ್ಟ ಬಹುಮತದ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಿ, ಎಚ್.ಡಿ.ಕೋಟೆ ಕ್ಷೇತ್ರದ ಜೆಡಿಎಸ್ ಅಭ್ಯಥಿ ಕ್ರಿಯಾಶೀಲ ವ್ಯಕ್ತಿ, ವಿದ್ಯಾವಂತ ಜಯಪ್ರಕಾಶ್ ಚಿಕ್ಕಣ್ಣ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಜೆಡಿಎಸ್ ಪಕ್ಷಕ್ಕೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಪಂಚರತ್ನ ಸಮಾವೇಶದ ವೇದಿಕೆಯಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯಥಿ ಜಯಪ್ರಕಾಶ್ ಚಿಕ್ಕಣ್ಣ ಅವರಿಗೆ ಬಿ.ಫಾರಂ ನೀಡಿ ಆರ್ಶೀವದಿಸಿದರು.

ಈ ವೇಳೆ ಜಯಪ್ರಕಾಶ ಚಿಕ್ಕಣ್ಣ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ನನಗೆ ಬಿ.ಫಾರಂ ನೀಡಿ ಆಶೀರ್ವದಿಸಿದ್ದಾರೆ, ಕುಮಾರಣ್ಣ ಅವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿ ಮಾಡಲು ನನ್ನ ತಾಲ್ಲೂಕಿನ ಎಲ್ಲ ಮತದಾರ ದೇವರುಗಳು, ತಾಯಂದಿರು ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನಗೆ ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು