News Karnataka Kannada
Sunday, April 28 2024
ಉಡುಪಿ

ಕಾರ್ಕಳ: ಬಾವಿಗೆ ಇಳಿದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕ ದಳ

Karkala: Fire brigade rescues youth who fell into well to clean up
Photo Credit : News Kannada

ಕಾರ್ಕಳ: ಸ್ವಚ್ಚಗೊಳಿಸಲೆಂದು ಬಾವಿಗೆ ಇಳಿದು ಮೇಲೆ ಹತ್ತಲು ಸಾಧ್ಯವಾಗದೇ ಇದ್ದ ಯುವಕನೊಬ್ಬನನ್ನು ಅಗ್ನಿಶಾಮಕ ದಳವು ರಕ್ಷಿಸಿದ ಘಟನೆ ನಗರದ ಬಂಡೀಮಠ ಪರಿಸರದಲ್ಲಿ ನಡೆದಿದೆ.

ಬಂಡಿಮಠ ಬಳಿ ಗೋಪನಾಥ ಪುರಾಣಿಕ್ ರವರಿಗೆ ಸೇರಿದ ಬಾವಿಯಲ್ಲಿ ಪವನ್ ಪೂಜಾರಿ(32) ಎಂಬವರು ಸಿಲುಕಿಕೊಂಡಿದ್ದರು. ಅವರು ಬಾವಿಯ ಸ್ವಚತೆಗಾಗಿ ಇಳಿದು, ಮೇಲಕ್ಕೆ ಬರಲಾಗದೇ ಅಶಕ್ತರಾಗಿ ಉಳಿದುಕೊಂಡಿದ್ದಾರೆಂಬ ಮಾಹಿತಿಯು ಅಗ್ನಿಶಾಮಕ ದಳಕ್ಕೆ ತಲುಪಿತು.

ಅದರ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆ ಎತ್ತಿ ಪ್ರಾಣ ರಕ್ಷಣೆ ಮಾಡಿರುತ್ತಾರೆ. ಕಾರ್ಯಾಚರಣೆಯಲ್ಲಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ ಸಂಜೀವ್, ಸಿಬ್ಬಂದಿಗಳಾದ ಹರಿಪ್ರಸಾದ್ ಶೆಟ್ಟಿಗಾರ್, ಜಯಮೂಲ್ಯ, ನಿತ್ಯಾನಂದ ಬಸವರಾಜ್,ಭೀಮಪ್ಪ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು