ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯ ಶ್ರೀ ಬಸವೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ರೇಖಾರವೀಂದ್ರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಆಡಳಿತ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ರೇಖಾ ರವೀಂದ್ರ ಅವರನ್ನು ಹೊರತು ಪಡಿಸಿ ಬೇರಾರೂ ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸವಿತಾ ಅವರು ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ನೂತನ ನಿರ್ದೇಶಕರಾಗಿ ಚೆಲುವಾಂಭಪ್ರಸಾದ್, ರತ್ನಬಸವರಾಜ್, ರೂಪಸತೀಶ್, ಮಂಜುಳಾರವಿ, ರಾಣಿಲೋಕೇಶ್, ಜಮುನಪ್ರೇಮ್ಕುಮಾರ್, ಮೀನಾಕ್ಷಮ್ಮರಂಗಸ್ವಾಮಿ, ಲಕ್ಷ್ಮಿಶ್ರೀನಿವಾಸ್, ನಂದಮಹೇಶ್ ರವರು ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ರೇಖಾರವೀಂದ್ರ ಅವರು, ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ದೃಷ್ಠಿಯಿಂದ ಮತ್ತಷ್ಟು ಷೇರುದಾರರನ್ನು ಹೆಚ್ಚಿಸಿ ಸಂಘದ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದರ ಜತೆಗೆ ಸಂಘದ ಷೇರುದಾರರ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರಲ್ಲದೆ ಸಂಘದ ಆರ್ಥಿಕ ಅಭಿವೃದ್ದಿಗೆ ಇನ್ನಷ್ಟು ಶ್ರಮಿಸುವುದರೊಂದಿಗೆ ಸಂಘದ ಸದಸ್ಯರ ಹಿತಕ್ಕಾಗಿ ನೂತನ ಯೋಜನೆಗಳನ್ನು ರೂಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ನಿರ್ದೇಶಕರ ಮಕ್ಕಳಾದ ಮೋನಿಷ. ಸಿ. ಆರ್, ವರ್ಷ.ಟಿ.ಪಟೇಲ್ ಮತ್ತು ಐಶ್ವರ್ಯ.ಪಿ ಇವರುಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.