News Karnataka Kannada
Thursday, May 02 2024
ಮೈಸೂರು

ಮೈಸೂರು: ವಾರಾಂತ್ಯಕ್ಕೆ ತುಘಲಕ್‌ ನಾಟಕ ಪ್ರದರ್ಶನ

Drama
Photo Credit : By Author

ಮೈಸೂರು: ಕ್ರಿ.ಶ. 1327ರಲ್ಲಿ ದಿಲ್ಲಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಮನುಷ್ಯನ ಸಾರ್ವಕಾಲಿಕ ಅನುಭವಕ್ಕೆ ರೂಪಕವಾಗಿ ಗಿರೀಶ್ ಕಾರ್ನಾಡರು ಕಟ್ಟಿಕೊಟ್ಟಿರುವ ‘ತುಘಲಕ್’ ನಾಟಕ ಪ್ರದರ್ಶನ ವಾರಾಂತ್ಯಕ್ಕೆ ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಜೂನ್ 18ರಂದು ಶನಿವಾರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿರುವ ಈ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ನಿರ್ದೇಶಿಸಿದ್ದಾರೆ. ತನ್ನ ಆದರ್ಶಗಳನ್ನು ಸಾಕಾರಗೊಳಿಸಲು ಹಲವಾರು ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮಹಮದ್ ಬಿನ್ ತುಘಲಕ್, ಆರ್ಥಿಕ ಉಪಯೋಗಕ್ಕಾಗಿ ಬೆಳ್ಳಿ ನಾಣ್ಯದ ಬದಲಿಗೆ ತಾಮ್ರದ ನಾಣ್ಯ ಚಲಾವಣೆ, ರಾಜ್ಯಾಡಳಿತದ ಅನುಕೂಲಕ್ಕಾಗಿ ರಾಜಧಾನಿಯ ಬದಲಾವಣೆ, ಜೂಜಿಗೆ ಹೆಚ್ಚು ತೆರಿಗೆ ವಿಧಿಸಿ ಶಾಲೆ-ಆಸ್ಪತ್ರೆಗಳ ಸ್ಥಾಪನೆ ಹೀಗೆ ಹಲವಾರುಕ್ರಾಂತಿಕಾರಿ ಪರಿವರ್ತನೆಗಳಿಗೆ ಆದೇಶಿಸುತ್ತಾನೆ. ತನ್ನಉದ್ದೇಶವನ್ನು ವಿರೋಧಿಸಿದ ಆಂತರಿಕ ಹಾಗೂ ಬಾಹ್ಯ ಶತ್ರುಗಳನ್ನು ನಾಶಗೊಳಿಸುವುದು ನಾಟಕದ ಕಥಾವಸ್ತುವಾಗಿದೆ.

ರಂಗದ ಮೇಲೆ ನಾಟಕಕ್ಕೆ ಮಂಜುನಾಥಶಾಸ್ತ್ರಿ, ರವಿಪ್ರಸಾದ್, ಮುರಳಿ ಗುಂಡಣ್ಣ, ರಶ್ಮಿ ನಾರಾಯಣ್, ಹರಿಪ್ರಸಾದ್, ರಾಘವೇಂದ್ರ ಬೂದನೂರು, ಮಂಜು ವಿ. ನರಸಾಪುರ, ವಿಜಯ್, ಪ್ರಣವ ಸ್ವರೂಪ್, ರಘು, ಶಿವಮೂರ್ತಿ, ಮಂಜುಆರ್., ಗುರುರಾಜ್, ಭಾರ್ಗವಿ, ಆದರ್ಶ, ನವೀನ್, ಪ್ರಜ್ವಲ್, ರಕ್ಷಿತ್, ಹೊಯ್ಸಳ ಎನ್, ಧನುಷ್, ಗೌತಮ್, ಸಂಜಯ್ ಜೀವ ತುಂಬಲಿದ್ದಾರೆ.

ಇನ್ನು ನಾಟಕಕ್ಕೆ ಬೆಳಕು -ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ – ಬಿ.ಎಂ. ರಾಮಚಂದ್ರ, ಸಂಗೀತ-ಉದಿತ್ ಹರಿತಸ್, ರಂಗಸಜ್ಜಿಕೆ ಮತ್ತು ಪರಿಕರ- ಮಂಜು ಕಾಚಕ್ಕಿ, ಸಹ ನಿರ್ದೇಶನ – ಹರಿಪ್ರಸಾದ್‌ಕಶ್ಯಪ್, ನಿರ್ವಹಣೆ- ಮಂಜುನಾಥಶಾಸ್ತ್ರಿ ಮಾಡಲಿದ್ದಾರೆ.

ನಾಟಕಕುರಿತ ಮಾಹಿತಿಗಾಗಿ 9916212451/ 9901626701/ 9964656482 ನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು