News Karnataka Kannada
Tuesday, April 30 2024
ಮೈಸೂರು

ರಾಮಕೃಷ್ಣ ಆಶ್ರಮದ ನೀತಿಯನ್ನು ಖಂಡಿಸಿದ ಜ್ಞಾನಪ್ರಕಾಶ್ ಸ್ವಾಮೀಜಿ

Ntm School
Photo Credit :

ಮೈಸೂರು: ನೂರು ವರ್ಷಕ್ಕೂ ಹಳೆಯದಾದ ಪಾರಂಪರಿಕ ಎನ್‌ಟಿಎಂ ಹೆಣ್ಣು ಮಕ್ಕಳ ಶಾಲೆಯ ಉಳಿವಿಗಾಗಿ ಮಹಾರಾಣಿ ಮಾದರಿ ಕನ್ನಡ ಶಾಲೆ ಉಳಿಸಿ ಹೋರಾಟ ಒಕ್ಕೂಟದ ನಡೆಯುತ್ತಿರುವ ಹೋರಾಟ 46ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರವೂ ಶಾಂತಿಯುತವಾಗಿ ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ವಿವೇಕಾನಂದರನ್ನು ಸ್ಮಾರಕದ ರೂಪದಲ್ಲಿ ನೋಡಬಾರದು. ಇದು ವಿವೇಕದ ಹೆಸರಿನಲ್ಲಿ ಅವಿವೇಕತನ ಮಾಡಿದಂತಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ಪಷ್ಟ ವರದಿ ಕೊಟ್ಟಿದ್ದಾರೆ. ಪಕ್ಕದಲ್ಲೇ ನಿರಂಜನ ಮಠ ಇದೆ. ಬಹಳ ಪುರಾತನವಾದಂತಹ ಮಠ ಅದು. ಅದರ ಇತಿಹಾಸ, ಶಾಲೆ ಎರಡೂ ನಾಶವಾಗುತ್ತದೆ. ವಿವೇಕದ ಹೆಸರಲ್ಲಿ ಯಾಕಿಷ್ಟು ಅವಿವೇಕ? ಯಾವುದು ವಿವೇಕ? ಯಾವುದು ಅವಿವೇಕ? ಎನ್ನುವ ಚರ್ಚೆಯಾಗಬೇಕು. ವಿವೇಕ ಎಂದರೆ ಅಕ್ಷರ, ಅರಿವು ಕೊಡುವುದು. ಇತಿಹಾಸ ಪ್ರಸಿದ್ದ ಶಾಲೆಯನ್ನು ಉರುಳಿಸಿ ಸ್ಮಾರಕ ಕಟ್ಟುತ್ತೇನೆ ಎನ್ನುವುದು ವಿವೇಕ ಅಲ್ಲ. ಗುಡಿಗೋಪುರಗಳ ಸಂಸ್ಕೃತಿಯನ್ನು ವಿವೇಕಾನಂದರು ವಿರೋಧಿಸಿದ್ದರು. ಗುಡಿಗೋಪುರಗಳ ಹೆಸರಲ್ಲಿ ನರಬಲಿ ನಡೆಯುತ್ತಿದೆ ಎಂದು ಮೊಟ್ಟಮೊದಲು ತಿರುಗಿಬಿದ್ದವರು ವಿವೇಕಾನಂದರು. ಅಂತಹವರ ಹೆಸರಲ್ಲಿ ನೀವೆಷ್ಟು ಅಪಚಾರ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು