News Karnataka Kannada
Sunday, May 19 2024
ಮೈಸೂರು

ಮನೆ ಕಟ್ಟಿಕೊಡಿ ವೋಟ್ ಹಾಕ್ತೀನಿ, ಇಲ್ಲಾಂದ್ರೆ… : ವೃದ್ಧೆ ಕಣ್ಣೀರು ಕೇಳೋರ್ಯಾರು

Elderly woman who lost her house: Officials, people's representatives refuse to respond
Photo Credit : News Kannada

ಮನೆ ಕಟ್ಟಿಕೊಡಿ ವೋಟ್ ಹಾಕ್ತೀನಿ…ಇಲ್ಲಾಂದ್ರೆ ವೋಟ್ ಹಾಕಲ್ಲ…ಮನೆ ಕಳೆದುಕೊಂಡ ವೃದ್ದೆಯ ಕಣ್ಣೀರು… ಸ್ಪಂದಿಸದ ಅಧಿಕಾರಿಗಳು, ಜನಪ್ರತಿನಿಧಿಗಳು…

ಮೈಸೂರು: ಮನೆ ಕಟ್ಟಿಕೊಟ್ರೆ ಓಟ್ ಹಾಕ್ತೀನಿ ಇಲ್ಲಾಂದ್ರೆ ಓಟ್ ಹಾಕಲ್ಲ ಎಂದು ವೃದ್ದೆಯೊಬ್ಬರು ಕುಸಿದು ಬಿದ್ದ ಮನೆ ಮುಂದೆ ಕುಳಿತು ಕಣ್ಣೀರು ಹಾಕಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ತಾಲೂಕಿನ ನಂಜನಹಳ್ಳಿ ಗ್ರಾಮದ ಸಿದ್ದರಾಜಮ್ಮ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಿದ್ದರಾಜಮ್ಮ ವಾಸವಿದ್ದ ಮಣ್ಣಿನ ಮನೆಯ ಒಂದು ಭಾಗ ಕುಸಿದು ಐದಾರು ತಿಂಗಳಾಗಿದೆ ಮನೆ ಪುನರ್ ನಿರ್ಮಾಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ್ದಾರೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಹೀಗಿದ್ದೂ ಯಾವುದೇ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ತಲೆ ಕೆಡಿಸಿಕೊಂಡಿಲ್ಲ. ಇದೀಗ ಮತ ಪ್ರಚಾರ ಮಾಡಲು ಬಂದ್ರೆ ಮನೆ ಕಟ್ಟಿಕೊಡಿ ಇಲ್ಲಾಂದ್ರೆ ವೋಟ್ ಹಾಕಲ್ಲ ಎಂದು ತೀರ್ಮಾನಿಸಿ ಕುಸಿದ ಮನೆ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ.

ನಂಜನಗೂಡು ತಾಲೂಕು ಆಡಳಿತ ಕುಸಿದ ವಾಸದ ಮನೆಗೆ ಪರಿಹಾರ ನೀಡಿಲ್ಲ ಮನೆ ಪುನರ್ ನಿರ್ಮಾಣಕ್ಕೂ ಗಮನಹರಿಸಿಲ್ಲ ಇನ್ನಾದ್ರೂ ವೃದ್ದೆಯ ಕಣ್ಣೀರು ಜನಪ್ರತಿನಿಧಿಗಳ ಕಣ್ಣು ತೆರೆಸುವುದೇ ಕಾದು ನೋಡಬೇಕಿದೆ…!

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು