ಮೈಸೂರು, : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾದ ಘಟನೆ ಗೀತಾ ರಸ್ತೆಯಲ್ಲಿ ನಡೆದಿದೆ.
ಅಶೋಕ (ಬಲ್ಲಾಳ) ವೃತ್ತದಸಮೀಪದ ಗೀತಾ ರಸ್ತೆಯಲ್ಲಿ ನಿನ್ನೆ ರಾತ್ರಿ 8ಗಂಟೆಯ ಸುಮಾರಿಗೆ ವಿಜಯಕುಮಾರಿ(70)ಎಂಬವರು ದಿನಸಿ ಖರೀದಿಸಿ ಮನೆಗೆ ವಾಪಸ್ ನಡೆದುಕೊಂಡು ಬರುತ್ತಿದ್ದ ವೇಳೆ ಕಳ್ಳರು ಇವರ ಕುತ್ತಿಗೆಯಲ್ಲಿದ್ದ 50ಗ್ರಾ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಜನ ಸಂಚಾರ ವಿರಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.