ಮೈಸೂರು: ಅಪಘಾತದಲ್ಲಿ ಮೃತಪಟ್ಟ ಅರಣ್ಯ ರಕ್ಷಕ ದಂಡಯ್ಯ ಅವರ ಕುಟುಂಬಕ್ಕೆ ಮೂವತ್ತು ಲಕ್ಷ ರೂ.ಗಳ ಪರಿಹಾರದ ಆದೇಶ ಪ್ರತಿಯನ್ನು ಶಾಸಕ ಕೆ ಮಹದೇವ್ ವಿತರಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹರವೆ ಸಿಪಿಟಿ 4 ರಲ್ಲಿ ಹುಣಸೂರು ವನ್ಯಜೀವಿ ವಲಯಕ್ಕೆ ಸೇರಿದ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ರಕ್ಷಕ ದಂಡಯ್ಯ, ಅವರು ಮುತ್ತೂರು ವಲಯದಲ್ಲಿ ಪ್ರಭಾರರಾಗಿ ಕರ್ತವ್ಯಕ್ಕೆ ನಿಯೋಜನೆಯಾಗಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಮೋಟಾರ್ ಬೈಕ್ ನಲ್ಲಿ ಪಿರಿಯಾಪಟ್ಟಣ ಸಿದ್ದಾಪುರ ರಸ್ತೆಯ ಎಲೆತೋಟದ ಬಳಿ ಅಪಘಾತಕ್ಕೀಡಾದ ಸಂದರ್ಭದಲ್ಲಿ ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಗಾಯಗೊಂಡಿದ್ದರು.
ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ಪರಿಹಾರ ವಿತರಿಸಲಾಗಿದೆ.
ಈ ವೇಳೆ ಮಾತನಾಡಿದ ಶಾಸಕ ಕೆ ಮಹದೇವ್ ಅವರು ಸರ್ಕಾರದಿಂದ ಬಿಡುಗಡೆಯಾದ ಹಣ ಹಣದಿಂದ ಯಾವುದೇ ದುಂದು ವೆಚ್ಚಗಳನ್ನು ಮಾಡದೆ ಹಣವನ್ನು ದುರ್ಬಳಕೆ ಮಾಡಿಕೊಳ್ಳದೆ ಉತ್ತಮ ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸಬೇಕು ಎಂದು ತಿಳಿಸಿದರು
ತಾಲೂಕು ದಂಡಾಧಿಕಾರಿ ಚಂದ್ರ ಮೌಳಿ, ತಾಲೂಕು ಕಾರ್ಯನಿರ್ವಾಣಾಧಿಕಾರಿ ಕೃಷ್ಣಕುಮಾರ್, ಆನೆ ಚೌಕೂರು ವಲಯ ಅಧಿಕಾರಿ ಮನೋಹರ್ ಹಾಜರಿದ್ದರು.