News Karnataka Kannada
Friday, May 03 2024
ಮಡಿಕೇರಿ

ಮಳೆಗಾಗಿ ಉಡುಪಿಯ ಶಿರೂರು ಮಠದ ಯತಿಗಳಿಂದ ಪೂಜೆ

ಕೊಡಗಿನಲ್ಲಿ ಸಮೃದ್ಧವಾಗಿ ಮಳೆ ಬರಲು  ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಜಿಲ್ಲೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
Photo Credit : By Author

ಮಡಿಕೇರಿ: ಕೊಡಗಿನಲ್ಲಿ ಸಮೃದ್ಧವಾಗಿ ಮಳೆ ಬರಲು  ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಜಿಲ್ಲೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಬೆಳಿಗ್ಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಭಾಗಮಂಡಲದಲ್ಲೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯ ಮುಜರಾಯಿ  ಸಚಿವ ರಾಮಲಿಂಗರೆಡ್ಡಿ  ಅವರನ್ನು ಭೇಟಿಯಾಗಿ ಅವರ ಸಮಕ್ಷಮದಲ್ಲಿ ಬೆಂಗಳೂರಿನಲ್ಲಿ ಪೂಜೆ ನೆರವೇರಿಸಿದ ನಂತರ ರಾಜರಾಜೇಶ್ವರ ದೇಗುಲದಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದು ಶ್ರೀರಂಗನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಭಾಗಮಂಡಲ ತಲಕಾವರಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ಯತಿಗಳು ಮಠದಲ್ಲಿ ಪೂಜೆ ನೆರವೇರಿಸುವ ಪಟ್ಟದ ದೇವರ ಮೂರ್ತಿಗಳ  ಸಹಿತ ಆಗಮಿಸಿ ವಿಶೇಷ ಪೂಜೆಯನ್ನು ಮಳೆಗಾಗಿ ನೆರವೇರಿಸಿದ್ದಾರೆ.  ಪೂಜೆ ನೆರವೇರಿಸಿದ ನಂತರ ಕೊಡಗಿನಲ್ಲಿ ಮಳೆ  ಬೀಳಲಿದೆ ಎಂದು ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜೀವ ಜಲಕ್ಕೆ ವರುಣನ ಕೃಪೆಯಾಗಬೇಕು, ಕುಡಿಯುವ ನೀರಿಗೆ, ಕೃಷಿಗೆ  ಮಳೆಯ ಮೂಲಕ ವರುಣನ ಆಗಮನವಾಗಬೇಕು  ಕೊಡಗಿನಲ್ಲಿ ಬೆಳೆಗಳು ಸಮೃದ್ಧವಾಗಬೇಕು ಎಲ್ಲರೂ ಸುಖಿಗಳಾಗಿ ಬದುಕಬೇಕು ಎಂಬ ಸಂಕಲ್ಪದೊಂದಿಗೆ ಈ ಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದು ಹೇಳಿದರು. ಇಂದಿನ ಪೂಜೆಯಲ್ಲಿ ಭಾಗಮಂಡಲ ಸುತ್ತಮುತ್ತಲಿನ ಭಕ್ತಾದಿಗಳು, ಪಾರುಪತ್ತೆಗಾರರಾದ ಪೊನ್ನಣ್ಣ, ಕ್ಷೇತ್ರ ಪುರೋಹಿತರಾದ ಹರೀಶ್ ಭಟ್ರು, ಮತ್ತಿತರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು