ಹಾಸನ: ಶಿವಲಿಂಗೇಗೌಡರು ಸದನದಲ್ಲಿಯೇ ನಾನು ಜೆಡಿಎಸ್ ಶಾಸಕ ಎಂದು ಒಪ್ಪಿಕೊಂಡಿದ್ದಾರೆ. ಅದೇ ಮಾತನ್ನು ಸದನದ ಹೊರಗೂ ಅವರು ಹೇಳಬೇಕಿದೆ. ನಾವೇನು ಶಿವಲಿಂಗೇಗೌಡರನ್ನು ಜೆಡಿಎಸ್ ಬಿಡಿ ಎಂದು ಎಲ್ಲಿಯೂ ಹೇಳಿಲ್ಲ ಅಲ್ಲದೇ ಅರಸೀಕೆರೆಯಲ್ಲಿ ಯಾರು ಅಭ್ಯರ್ಥಿಯೆಂದು ಈವರೆಗೂ ಪಕ್ಷ ಘೋಷಿಸಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅಂದಿನ ಸಭೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ರವರು ಮುಂದಿನ ಮುಖ್ಯಮಂತ್ರಿಯಾಗುವವರೆಗೆ ಹಾಗೂ ಅರಸೀಕೆರೆಯಲ್ಲಿ ಜೆಡಿಎಸ್ ಗೆಲ್ಲುವ ವರೆಗೆ ನಿದ್ದೆ ಮಾಡುವುದಿಲ್ಲವೆಂದು ಹೇಳಿದ್ಧೇನೆಯೇ ಹೊರತು. ಶಿವಲಿಂಗೇ ಗೌಡರ ವಿರುದ್ದ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿದ ಸಂಸದ ಪ್ರಜ್ವಲ್ ರೇವಣ್ಣ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ನಾನು ಟೊಂಕ ಕಟ್ಟಿ ಕೆಲಸ ಮಾಡುತ್ತೇನೆ.
ಶಿವಲಿಂಗೇಗೌಡರು ಸದನದಲ್ಲಿಯೇ ನಾನು ಜೆಡಿಎಸ್ ಶಾಸಕ ಎಂದು ಒಪ್ಪಿಕೊಂಡಿದ್ದಾರೆ. ನಾವೇನು ಶಿವಲಿಂಗೇಗೌಡರನ್ನು ಜೆಡಿಎಸ್ ಬಿಡಿ ಎಂದು ಎಲ್ಲಿಯೂ ಹೇಳಿಲ್ಲ. ಹಾಗೂ ಅರಸೀಕೆರೆಗೆ ಯಾರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಅವರು ಜೆಡಿಎಸ್ನಲ್ಲಿ ಇದ್ದಾರೋ ಬಿಟ್ಟಿದ್ದಾರೋ ಎಂಬುದರ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು. ಕುಮಾರಣ್ಣನ ಮುಖ್ಯಮಂತ್ರಿ ಮಾಡುವವರೆಗೂ ಅರಸೀಕೆರೆ ಜನ ಮಲಗುವುದಿಲ್ಲ. ದೇವೇಗೌಡರು, ಕುಮಾರಣ್ಣ ಕ್ಷೇತ್ರದ ಅಭ್ಯರ್ಥಿ ಯಾರೆಂದು ಘೋಷಣೆ ಮಾಡ್ತಾರೆ. ಯಾರಾದ್ರು ಅಭ್ಯರ್ಥಿಯಾಗಲಿ, ಅರಸೀಕೆರೆ ಜೆಡಿಎಸ್ ಭದ್ರಕೋಟೆ, ನಾವಂತೂ ಜೆಡಿಎಸ್ ಉಳಿಸುವಂತಹ ಕೆಲಸ ಮಾಡ್ತಿವಿ. ಯಾರಾದ್ರು ಅಭ್ಯರ್ಥಿ ಆಗಲಿ ಅರಸೀಕೆರೆ ಗೆಲ್ಲಬೇಕು ಅಷ್ಟೇ ಎಂದರು.