News Karnataka Kannada
Sunday, April 28 2024
ಹಾಸನ

ಅರಸೀಕೆರೆ: ಜೆ.ಡಿ.ಎಸ್. ಜೊತೆ ಇರಲು ಕಡೇ ಚಾನ್ಸ್- ಪ್ರಜ್ವಲ್ ರೇವಣ್ಣ ಎಚ್ಚರಿಕೆ

Arasikere: JD(S) Prajwal Revanna warns of last chance to be with him
Photo Credit : News Kannada

ಅರಸೀಕೆರೆ: ದೇವೇಗೌಡರು ಕುಮಾರಸ್ವಾಮಿ ಹೆಸರೇಳಿದ ಕೂಡಲೆ ಯಾರು ಓಡಿ ಬಂದು ಓಟ್ ಹಾಕಲ್ಲ ಹಣ ಕೊಟ್ಟರೆ ಮಾತ್ರ ಅರಸೀಕೆರೆ ಜನ ಓಟು ಹಾಕುತ್ತಾರೆ ಎಂದು ಕೆಲವರು ಹೇಳುತ್ತಿದ್ದು, ನೋಡೋಣ ಹಾಗಿದ್ರೆ ಹಣ ಬಲ ನಡೆಯುತ್ತಾ, ಅಥವಾ ಜನರ ಬಲ ನಡೆಯುತ್ತಾ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಶಾಸಕ ಶಿವಲಿಂಗೇಗೌಡ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ನಗರದ ೩ ನೇ ವಾರ್ಡ್‌ನ ಗುಂಡ್ಕಾನ ಹಳ್ಳಿಯಲ್ಲಿ ಜೆ.ಡಿ.ಎಸ್.ಪಕ್ಷದ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಹಣ ಕೊಟ್ಟರೆ ಮಾತ್ರ ಓಟ್ಟು ಹಾಕುತ್ತಿರಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದ ಅವರು ಶಿವಲಿಂಗೇಗೌಡ ಅವರಿಗೆ ಕಿವಿಮಾತು ಹೇಳ್ತಿನಿ ತಪ್ಪು ದಾರಿಗೆ ಹೋಗಬೇಡಿ ಅದರ ಮೇಲೆ ಅವರಿಗೆ ಬಿಟ್ಟ ವಿಚಾರ, ಅವರಿಗೆ ಒಳ್ಳೆಯದು ಆಗಲಿ ಎಂದ ಅವರು, ಪಕ್ಷ ಬಿಡಬೇಡಿ ಇಲ್ಲೇ ಇರಿ ಎನ್ನುತ್ತಲೇ ಪರೋಕ್ಷವಾಗಿ ನೀವು ಹೋದ್ರೆ ನಮಗೇನು ಸಮಸ್ಯೆ ಇಲ್ಲಾ ಎನ್ನುವ ಮಾತು ಹೇಳಿದರು.

ದೇವೇಗೌಡರಿಗೆ ರಾಜಕೀಯ ಶಕ್ತಿ ಬಂದಿದ್ದು ನಿಮ್ಮಂತ ಪುಣ್ಯಾತ್ಮರಿಂದ ಒಂದೇ ದಿನಕ್ಕೆ ಇಷ್ಟೊಂದು ಜನ ಸೇರಿರೋದು ನೋಡಿದ್ರೆ ಅರಸೀಕೆರೆ ಚಿತ್ರಣ ಬದಲಾಗಿರೋದು ಕಾಣುತ್ತೆ ಎಲ್ಲರಿಗು ಕೈ ಮುಗಿಯುತ್ತೇನೆ ದೇವೇಗೌಡರ ಕೈ ಬಲಪಡಿಸಿ ಕುಮಾರಸ್ವಾಮಿ ಪಂಚರತ್ನಯಾತ್ರೆ ಮಾಡುತ್ತಿದ್ದಾರೆ. ಫೆ.೧೨ ಕ್ಕೆ ದೇವೇಗೌಡರು, ಕುಮಾರಸ್ವಾಮಿ ಪಂಚರತ್ನ ಯಾತ್ರೆ ಸಭೆಗೆ ಬರ್ತಾರೆ ನಂತರ ಫೆಬ್ರವರಿ ೨೪ ವರೆಗೆ ಬೇರೆ ತಾಲ್ಲೂಕಿನಲ್ಲಿ ನಡೆಯಲಿದೆ ಫೆಬ್ರವರಿ ೧೨ ಕಳೆದ ಬಳಿಕ ಈ ಕ್ಷೇತ್ರ ಉಳಿಯಲು ದೇವೇಗೌಡರ ಕೊಡುಗೆ, ಕುಮಾರಸ್ವಾಮಿ ಕೊಡುಗೆ ಇದೆ ಹಾಗೂ ನಾನು ಇಂಧನ ಸಚಿವರಾಗಿ ಏನು ಮಾಡಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿ ಹೇಳ್ತೇನೆ ನಾನೂ ಈ ಜಿಲ್ಲೆಯಲ್ಲಿ ಇಪ್ಪತ್ತೈದು ವರ್ಷ ಶಾಸಕನಾಗಿ ರಾಜಕೀಯ ಮಾಡಿದ್ದೀನಿ ನನಗೆ ಇಲ್ಲಿನ ರಾಜಕೀಯ ಎಲ್ಲ ಗೊತ್ತಿದೆ ಎಂದು ಟಾಂಗ್ ನೀಡಿದರು.

ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರ ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ಪರ್ವ ಕಾಲ ಕೂಡಿ ಬಂದಿದೆ, ಹಾಸನ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳಲ್ಲಿ ಜೆ.ಡಿ.ಎಸ್.ಪಕ್ಷದ ಅಭ್ಯರ್ಥಿ ಗಳ ಗೆಲುವಿಗೆ ಅವಿರತ ಹೋರಾಟವನ್ನು ನಡೆಸುವ ಸಂಕಲ್ಪ ತಮ್ಮದಾಗಿದೆ ಎಂದು ತಿಳಿಸಿದರು.

ಹಾಸನ ಕ್ಷೇತ್ರದ ಸಂಸದನಾಗಿ ೪ ವರ್ಷಗಳು ಕಳೆದಿದೆ, ೨ ವರ್ಷ ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ನಿಯಂತ್ರಿಸಲು ಸತತ ಪರಿಶ್ರಮ ವಹಿಸಿದ್ದೇನೆ, ಕಡೂರು ಕ್ಷೇತ್ರವು ಸೇರಿದಂತೆ ತಮ್ಮ ಸಂಸದರ ಕ್ಷೇತ್ರದ ವ್ಯಾಪ್ತಿಗೆ ೬೪೮೦ಕ್ಕೂ ಹೆಚ್ಚಿನ ಗ್ರಾಮಗಳನ್ನು ಒಳಗೊಂಡಿದ್ದು, ಎಲ್ಲಾ ಗ್ರಾಮಗಳ ಜನತೆಯನ್ನು ಸ್ವತಃ ಬೇಟಿ ಮಾಡಿಲ್ಲ ಎಂಬ ಅಸಮಾದಾನ ತಮ್ಮನ್ನೂ ಇನ್ನೂ ಕಾಡುತ್ತಿದೆ, ೧೯ ವರ್ಷ ವಯಸ್ಸಿನಿಂದಲ್ಲೇ ರಾಜಕಾರಣಕ್ಕೆ ಬಂದ ನಾನು ೨೮ ವರ್ಷ ವಯಸ್ಸಿನಲ್ಲಿ ನನಗೆ ಸ್ವಕ್ಷೇತ್ರವನ್ನು ಬಿಟ್ಟುಕೊಟ್ಟಂತಹ ಎಚ್.ಡಿ.ದೇವೇಗೌಡರ ಆಶೀರ್ವಾದ ಶ್ರೀರಕ್ಷೆಯಾಗಿದ್ದು, ಜೊತೆಗೆ ತಮ್ಮೇಲ್ಲರ ಆಶೀರ್ವಾದ ಹಾಗೂ ಹೋರಾಟದ ಸಲುವಾಗಿ ಹಾಸನ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷೆ ಪ್ರೇಮ ನಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ಬಾಣಾವರ ಅಶೋಕ್,ತಾ.ಪಂ.ಮಾಜಿ ಸದಸ್ಯ ಟಿ.ಆರ್.ಕೃಷ್ಣಮೂರ್ತಿ, ಹೊಸೂರು ಗಂಗಾಧರ್, ಶೇಖರ ನಾಯ್ಕ್, ವೆಂಕಟೇಶ್ ನಾಯ್ಕ್, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಕೆ.ಎಸ್.ಚಂದ್ರಶೇಖರ್, ಶಶಿಧರ್, ರಾಜಣ್ಣ ಹಾಗೂ ಇನ್ನಿತರ ಮುಖಂಡರು ಹಾಗೂ ಸಾವಿರಾರು ಸಂಖ್ಯೆ ಕಾರ್ಯಕರ್ತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು