ಬೇಲೂರು: ಚುನಾವಣೆ ಹತ್ತಿರ ಬರುತ್ತಿದಂತೆ ಶಾಸಕ ಲಿಂಗೆಶ್ ರವರಿಂದ ಮತದಾರರಿಗೆ ಕಣ್ಣು ಒರೆಸುವ ತಂತ್ರ ನಡೆಯುತ್ತಿದೆ ಬೇಲೂರು ಸಕಲೇಶಪುರ ಮಾರ್ಗ ರಸ್ತೆ ಗುಂಡಿ ಬಿದ್ದು ಹಾಳಾಗಿರುವ ಹಿನ್ನೆಲೆ ಸಂಘಟನೆಗಳು ಸಾರ್ವಜನಿಕರು ಕೆಲವು ಹೋರಾಟಗಳನ್ನು ಮಾಡಲಾಗಿತ್ತು. ನಂತರ ಎಚ್ಚೆತ್ತುಕೊಂಡ ಶಾಸಕರಾದ ಕೆ.ಎಸ್. ಲಿಂಗೇಶರವರು ಗುಂಡಿಗೆ ಸರಿಯಾಗಿ ಡಾಂಬರೀಕರಣ ಹಾಕುವ ಕಾಮಗಾರಿ ಕೆಲಸವನ್ನು ಯಾವ ಪುಣ್ಯಾತ್ಮನಿಗೆ ನೀಡಿದ್ದಾರೋ ತಿಳಿಯದು ಕಾಮಗಾರಿ ಟೆಂಡರ್ ದಾರಾರು ಎಸ್ಟಿಮೆಂಟ್ ಪ್ರಕಾರ ಕಾಮಗಾರಿ ನಡೆಸುತ್ತಿಲ್ಲ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ ಸಾರ್ವಜನಿಕರು ಟೆಂಡರ್ ದಾರನಿಗೆ ಹಾಗೂ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ತಕ್ಷಣ ಕೆಲವು ಹಳ್ಳಿಗಳಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಗುದ್ದಲಿ ಪೂಜೆ ನಡೆಸುವುದು ಜೋರಾಗಿ ಕಂಡು ಬರುತ್ತಿದೆ ಆದರೆ ಸಾರ್ವಜನಿಕರು ಶಾಸಕರು ಚುನಾವಣೆ ಹತ್ತಿರ ಬಂದ ತಕ್ಷಣ ಸಾರ್ವಜನಿಕರ ಕಣ್ಣುಹೊರಿಸುವ ಕೆಲಸ ಮಾಡುತ್ತಿದ್ದಾರೆ ಇಷ್ಟು ವರ್ಷ ಅಭಿವೃದ್ಧಿ ಮಾಡದ ಶಾಸಕರು ಈ ಸಂದರ್ಭದಲ್ಲಿ ತರಾತುರಿಯಾಗಿ ಗುದ್ದಲಿ ಪೂಜೆ ನೆರವೇರಿಸುವಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.
ಶಾಸಕರೇ ಈಗ ಮಾಡುತ್ತಿರುವ ಕಾಮಗಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿಯನ್ನಾದರೂ ದಯಮಾಡಿ ಮಾಡಿಸಿ ಕೊಡಿ ಈ ಕಳಪೆ ಕಾಮಗಾರಿಯನ್ನು ನೋಡಿದರೆ ೪೦%ಪರ್ಸೆಂಟ್ ಕಾಮಗಾರಿ ಅಂತ ಎದ್ದು ಕಾಣುತ್ತಿದೆ ಅಥವಾ ಹೀಗೆ ಕಳಪೆ ಕಾಮಗಾರಿ ಮಾಡಿದರೆ ಬಿಕ್ಕೋಡು ಹೋಬಳಿಯಲ್ಲಿ ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.