ಕೊಣನೂರು: ಬರಿ ಲಾಭವನ್ನೇ ಗಮನವಿಟ್ಟುಕೊಳ್ಳದೆ ಸಾರ್ವಜನಿಕರ ಹಿತಕ್ಕಾಗಿ ನಿರಂತರವಾಗಿ ಸೇವೆಯನ್ನು ನೀಡುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇನ್ನಷ್ಟು ಶಕ್ತಿಯುತ ವಾಗಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಶಿಸಿದರು.
ರಾಮನಾಥಪುರದಲ್ಲಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಯ ಘಟಕದಲ್ಲಿ ೬೫ ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಈ ಮೊದಲು ಘಟಕದ ಒಳಗೆ ಅತಿ ಯಾದ ಧೂಳಿನಿಂದ ಕಾರ್ಯ ನಿರ್ವಹಿಸಲು ಕಷ್ಟಕರವಾಗಿತ್ತು. ಇದನ್ನು ತಪ್ಪಿಸಿ ಸ್ವಚ್ಚತೆಯನ್ನು ಕಾಪಾಡುವ ದೃಷ್ಟಿಯಿಂದ ಆವರಣ ವನ್ನು ೬೫ ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರಿಟೀಕರಣ ಮಾಡಲಾಗುತ್ತಿದೆ.
ಮಳೆ ಬಿದ್ದಾಗ ಘಟಕದ ಆವರಣದಲ್ಲಿ ನೀರು ನಿಲ್ಲುತ್ತಿದ್ದುದನ್ನು ತಪ್ಪಿಸಲು ಚರಂಡಿ ನಿರ್ಮಾಣ, ವಾಷಿಂಗ್ ರ್ಯಾಂಪ್ ಬಳಿ ಕಾಂಕ್ರೀಟಿಕರಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ಒಟ್ಟು ೮೯ ಲಕ್ಷ ಅನುದಾನ ಮಂಜೂರಾತಿಯಗಿದ್ದು ಸದ್ಯ ೬೫ ಲಕ್ಷ ರೂ ಮಾತ್ರ ಬಿಡುಗಡೆ ಯಾಗಿದೆ ಉಳಿದ ಅನುದಾನ ವನ್ನು ಸಹ ನೀಡಲಾಗುವುದು ಎಂದರು.
ಕೆ ಎಸ್ ಆರ್ ಟಿ ಸಿ ಯಲ್ಲಿ ಈಗಳು ಸಹ ಸ್ಕ್ರಾಪ್ ಆದ ಗಾಡಿ ಗಳನ್ನು ಓಡಿಸುತ್ತಿದ್ದು, ಹೊಸ ಮತ್ತು ಉತ್ತಮ ದರ್ಜೆಯ ವಾಹ ನಗಳನ್ನು ಒದಗಿಸಿದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡಲು ಸಹಾಕಾರಿಯಾಗಿಲಿದ್ದು, ಸರ್ಕಾರ ಈ ಕುರಿತು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕೆಎಸ್ಅರ್ಟಿಸಿ ಡಿ ಸಿ ಆರುಣ್, ವಿಭಾಗೀಯ ಸಂಚಲ ನಾಧಿಕಾರಿ ಸತೀಶ್, ಪ್ರಭಾರ ಘಟಕ ವ್ಯವಸ್ಥಾಪಕ ಕೃಷ್ಣಪ್ಪ, ಅಧಿಕಾರಿಗಳು, ಗ್ರಾ.ಪಂ ಸದಸ್ಯರು, ಮುಖಂಡರು ಮತ್ತು ಸ್ಥಳೀಯರು ಇದ್ದರು.