News Karnataka Kannada
Monday, April 29 2024
ಹಾಸನ

ಹಾಸನ: ನಿವೇಶನ ನೀಡಲು ಆಗ್ರಹಿಸಿ ಧರಣಿ

Haasan
Photo Credit : News Kannada

ಹಾಸನ: ತಾಲೂಕಿನ ಜೋಡಿ ತಟ್ಟೇಕೆರೆ ಗ್ರಾಮದಲ್ಲಿ ಹಕ್ಕು ಪತ್ರ ಹೊಂದಿರುವ ಫಲಾನು ಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ, ಕೆ.ವೈ ಜಗದೀಶ್ ಮಾತನಾಡಿ, ೧೯೯೧ ರಲ್ಲಿ ತಟ್ಟೇಕೆರೆ ಗ್ರಾಮದ ಸರ್ವೆ ನಂಬರ್ ೧೦೩ ರಲ್ಲಿ ಸರಕಾರ ಆಶ್ರಯ ಯೋಜನೆಯಡಿ ಎಲ್ಲಾ ಜಾತಿಯ ಕಡುಬಡವರಿಗೆ ನಿವೇಶನ ನೀಡಲಾಗಿದ್ದು ಆ ಜಾಗವನ್ನು ಅಭಿವೃದ್ದಿ ಪಡಿಸುವಲ್ಲಿ ತಟ್ಟೇಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲವಾಗಿದ್ದು ಇದರ ಪರಿಣಾಮ ಫಲಾನುಭವಿಗಳು ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಜಾಗವನ್ನು ಅಳತೆ ಮಾಡಿ ನಿವೇಶನ ಒದಗಿಸುವಂತೆ ಗ್ರಾಂ.ಪ ಗೆ ಅನೇಕ ಬಾರಿ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಅನೇಕರು ಅನಧಿಕೃತವಾಗಿ ಆ ಸ್ಥಳದಲ್ಲಿ ತಮಗೆ ಇಷ್ಟ ಬಂದಂತೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಇದರಿಂದ ಮೂಲ ಹಕ್ಕುಪತ್ರ ಪಡೆದ ಫಲಾನು ಭವಿಗಳಿಗೆ ಅನ್ಯಾಯವಾಗುತ್ತಿದೆ . ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇ ಶಿಸಿ ಹಕ್ಕು ಪತ್ರ ನೀಡಿರುವ ಸ್ಥಳದಲ್ಲಿ ಅದ್ದುಬಸ್ತು ಮಾಡಿ ಸ್ಥಳ ಗುರುತಿಸಿ ಮೂಲ ಹಾಜ್ಜುದರಾರಿಗೆ ನಿವೇಶನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ರಂಗಯ್ಯ, ರಾಜೇಗೌಡ, ತಮ್ಮಯ್ಯ, ಶಂಕರ್, ಮಂಜಯ್ಯ, ಉಮೇಶ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು