ಹಾಸನ: ತಾಲೂಕಿನ ಜೋಡಿ ತಟ್ಟೇಕೆರೆ ಗ್ರಾಮದಲ್ಲಿ ಹಕ್ಕು ಪತ್ರ ಹೊಂದಿರುವ ಫಲಾನು ಭವಿಗಳಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈ ಸಂಧರ್ಭದಲ್ಲಿ ಗ್ರಾಮದ ಮುಖಂಡ, ಕೆ.ವೈ ಜಗದೀಶ್ ಮಾತನಾಡಿ, ೧೯೯೧ ರಲ್ಲಿ ತಟ್ಟೇಕೆರೆ ಗ್ರಾಮದ ಸರ್ವೆ ನಂಬರ್ ೧೦೩ ರಲ್ಲಿ ಸರಕಾರ ಆಶ್ರಯ ಯೋಜನೆಯಡಿ ಎಲ್ಲಾ ಜಾತಿಯ ಕಡುಬಡವರಿಗೆ ನಿವೇಶನ ನೀಡಲಾಗಿದ್ದು ಆ ಜಾಗವನ್ನು ಅಭಿವೃದ್ದಿ ಪಡಿಸುವಲ್ಲಿ ತಟ್ಟೇಕೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲವಾಗಿದ್ದು ಇದರ ಪರಿಣಾಮ ಫಲಾನುಭವಿಗಳು ಅನೇಕ ಸಮಸ್ಯೆ ಎದುರಿಸುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಜಾಗವನ್ನು ಅಳತೆ ಮಾಡಿ ನಿವೇಶನ ಒದಗಿಸುವಂತೆ ಗ್ರಾಂ.ಪ ಗೆ ಅನೇಕ ಬಾರಿ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಅನೇಕರು ಅನಧಿಕೃತವಾಗಿ ಆ ಸ್ಥಳದಲ್ಲಿ ತಮಗೆ ಇಷ್ಟ ಬಂದಂತೆ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು ಇದರಿಂದ ಮೂಲ ಹಕ್ಕುಪತ್ರ ಪಡೆದ ಫಲಾನು ಭವಿಗಳಿಗೆ ಅನ್ಯಾಯವಾಗುತ್ತಿದೆ . ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇ ಶಿಸಿ ಹಕ್ಕು ಪತ್ರ ನೀಡಿರುವ ಸ್ಥಳದಲ್ಲಿ ಅದ್ದುಬಸ್ತು ಮಾಡಿ ಸ್ಥಳ ಗುರುತಿಸಿ ಮೂಲ ಹಾಜ್ಜುದರಾರಿಗೆ ನಿವೇಶನ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ರಂಗಯ್ಯ, ರಾಜೇಗೌಡ, ತಮ್ಮಯ್ಯ, ಶಂಕರ್, ಮಂಜಯ್ಯ, ಉಮೇಶ ಇತರರು ಇದ್ದರು.