ಆಲೂರು: ತಾಲೂಕಿನಾದ್ಯಂತ 23 ಕಾಮಗಾರಿಗಳಿಗೆ ಒಂದೇ ದಿನದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಲು ಮುಂದಾದ ಶಾಸಕರು ಕ್ಷೇತ್ರದ ಜನತೆಯ ಕಣ್ಣೀರು ಒರೆಸುವ ನಾಟಕವಾಡುತ್ತಿದ್ದಾರೆ.
ಐದು ವರ್ಷದಿಂದ ಕಣ್ಮರೆಯಾಗಿದ್ದ ಶಾಸಕರು ಏಕಾಏಕಿ ಚುನಾವಣೆ ಗಿಮಿಕ್ಕಿ ನಿಂದ ಸಣ್ಣಪುಟ್ಟ ಕಾಮಗಾರಿ ಗಳನ್ನು ಕೈಗೆತ್ತಿಕೊಂಡು ಗುದ್ದಲಿ ಪೂಜೆಗಳನ್ನು ಮಾಡುತ್ತಿ ರುವುದು ಮೇಲ್ನೋಟಕ್ಕೆ ಸರಿಯಾಗಿದ್ದು, ಅಕ್ಷರಶಃ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವೇ ಅಥವಾ ಗುದ್ದಲಿ ಪೂಜೆ ಮಾಡಿದಂತ ಕಾಮಗಾರಿಗಳು ತಟಸ್ಥವೇ ಇಲ್ಲ ಪ್ರಾರಂಭವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಸುಮಾರು ೧೫ ವರ್ಷದಿಂದ ಪ್ರಮುಖ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವ ಶಾಸಕರು ೧೯೩ ಹಳ್ಳಿಗಳಲ್ಲಿ ೨೩ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮಾಡುತ್ತಿರುವುದು ಎಷ್ಟರಮಟ್ಟಿಗೆ ಸಮಂಜಸವೇ.
ಮೂಲಭೂತ ಸೌಕರ್ಯಗಳಾದ ಮನೆ, ಕುಡಿಯುವ ನೀರು, ರಸ್ತೆ,ವಿದ್ಯುತ್ ದೀಪ, ಇವೆಲ್ಲವೂ ಕೆಲ ಹಳ್ಳಿಗಳ ಸೌಲಭ್ಯವಂಚಿತರಿಗೆ ಸಿಗದೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಡಾನೆ ಹಾವಳಿ,ರೈತರ ಸಂಕಷ್ಟಕ್ಕೆ ಸ್ಪಂದಿಸದ ಹಾಗೂ ತಾಲೂಕು ಅಭಿವೃದ್ಧಿಯಲ್ಲಿ ವಿಫಲವಾಗಿರುವ ಶಾಸಕರು ಹಳ್ಳಿಯ ಸಮಸ್ಯೆಗಳನ್ನು ಬಗೆಹರಿಸುತ್ತಾರೆಯೇ? ಮೇಲ್ನೋಟಕ್ಕೆ ಇಷ್ಟು ಸಮಸ್ಯೆಗಳು ಕಂಡು ಬಂದಿದ್ದು ಜನ ಸಾಮಾನ್ಯರ ಹತ್ತಿರ ಹೋದರೆ ಅದೆಷ್ಟೋ ಸಮಸ್ಯೆಗಳು ಉಳಿದಿರಬಹುದು?
ಮೀಸಲಾತಿ ಕ್ಷೇತ್ರದಲ್ಲಿ ಘರ್ಜಿಸುವ ಶಾಸಕರು ಬೇಕು ಎನ್ನುವುದು ಸಾರ್ವಜನಿಕರ ಅಭಿಲಾಷೆಯಾಗಿದೆ.
ಮುಂದೆ ಯಾದರೂ ಇಂತಹ ಶಾಸಕರು ಬರುತ್ತಾರೊ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿರುವ ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಜನತೆ.