ಹಾಸನ: ಜಿಲ್ಲೆಯು ಬೇಲೂರು, ಹಳೇಬೀಡು ಶ್ರವಣಬೆಳಗೊಳದ ಶಿಲ್ಪ ಕಲಾಕೃತಿಗಳು ವಿಶ್ವವಿಖ್ಯಾತ ಗಳಿಸುವ ಮೂಲಕ ಕಲೆಗಳ ಬೀಡು ಎಂದೆ ಖ್ಯಾತಿ ಗಳಿಸಿದೆ.ಆದರೆ ಗಾಂಧಿ ಭವನದ ಆವರಣದಲ್ಲಿ ನಿರ್ಮಿಸಿರುವ ಪ್ರತಿಮೆಗಳು ಮಹನಿಯರಿಗೆ ಅಪಹಾಸ್ಯ ಮಾಡುವ ರೀತಿ ನಿರ್ಮಾಣ ಮಾಡಲಾಗಿದ್ದು ಸಾರ್ವಜನಿಕರಿಂ ದ ತೀವ್ರ ಟೀಕೆಗೆ ಗುರಿಯಾಗಿದೆ.
ಮಹಾತ್ಮ ಗಾಂಧೀಜಿ ಹೋರಾಟದ ದಿನಗಳನ್ನು ನೆನೆಯಲು ಮುಂದಿನ ಜನಾಂಗಕ್ಕೆ ತಿಳಿಸಲು ಗಾಂಧಿಭವನ ನಿರ್ಮಾ ಣ ವಾಗುತ್ತಿರುವುದು ಸಂತಸದ ಸಂಗತಿ ಆದರೆ ಗಾಂಧಿಭವನದ ಒಳಗೆ ಗಾಂಧಿ ಪ್ರತಿಮೆ ಎಂದು ಹೇಳುವ ಪ್ರತಿಮೆಗಳು ನೋಡುಗರಿಗೆ ಕೋಪ, ಹಾಸ್ಯ, ಸೃಷ್ಟಿ ಮಾಡಿರುವುದು ನೋವಿನ ಸಂಗತಿ.
ಭವನ ನಿರ್ಮಾಣಕ್ಕೆ ೩ ಕೋಟಿ ವೆಚ್ಚ ಭರಿಸಲಾಗಿದ್ದು ಪ್ರತಿಮೆ ನಿರ್ಮಾಣಕ್ಕೆ ಅಂದಾಜು ?೨೬ ಲಕ್ಷ ನಿರ್ಮಿತ ಕೇಂದ್ರ ಕ್ಕೆ ನೀಡಲಾಗಿದೆ.
ಜಿಲ್ಲಾಡಳಿತ ಯಾವುದೇ ಕೆಲಸ ಮಾಡುವಾಗ ಆ. ಕ್ಷೇತ್ರದಲ್ಲಿ ನೈಪುಣ್ಯತೆ ಪಡೆದಿರುವವರ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಸಾರ್ಥಕವಾಗುತ್ತದೆ.
ಜಿಲ್ಲೆ ಕಲೆಯಲ್ಲಿ ವಿಶ್ವಕ್ಕೆ ಮಾದರಿ ಯಾಗಿದೆ ಹೆಸರನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಇದನ್ನು ಗಮನದ ಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಅದು ಬಿಟ್ಟು ಮನಸೋಇಚ್ಚೆ ಮಾಡುವುದು ಸರಿಯಲ್ಳ ಎಂದು ಕಲಾವಿದರು ಬಹಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ಕಲಾವಿದರು ಹೆಸರು ಉಳಿಸಿದ್ದಾರೆ ಆದರೆ ನಮ್ಮ ಜಿಲ್ಲೆಯಲ್ಲಿ ಇಂತಹ ಪ್ರತಿಮೆ ಆಗಿರುವುದು ನೋಡಿದರೆ ಮನಸ್ಸಿಗೆ ಬಹಳ ನೋವಾಗುತ್ತಿದೆ ಯಾರೇ ಕಲಾವಿದ ಮಾಡಲಿ ಅದು ವಿಶ್ವಮಟ್ಟದಲ್ಲಿ ಇರಬೇಕು ಏನೇನೋ ಮಾಡಿ ಕಲೆಗೆ ಅವಮಾನ ಮಾಡುವುದಲ್ಲ ಎಂದು ಹಲವು ಮಂದಿ ಕಲಾಕೃತಿ ನೋಡಿದವರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ.
ಗಾಂಧಿ ಭವನಕ್ಕೆ ಕಳೆದ ಎರಡು ಮೂರು ದಿನಗಳಿಂದ ಭೇಟಿ ನೀಡಿ ನೋಡಿದವರೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಂಧಿಯಂತೂ ’ಬಾಡಿ ಬಿಲ್ಡರ್’ ತರಹ ಕಾಣ್ತಾರೆ. ಅವರ ದೇಹ ಹಾಗೂ ರುಂಡಕ್ಕೂ ಸಂಬಂಧವೇ ಇಲ್ಲ. ಉಳಿದ ಶಿಲ್ಪಗಳಲ್ಲಿ ಕೆಲವರಂತೂ ಅಂಗ ಊನ ಆದವರಂತೆ ಕಾಣುತ್ತಾರೆ. ದೇಹದ ಅಂಗರಂಚನೆ ಮೂಲ ಪಾಠಗಳನ್ನೇ ಧಿಕ್ಕರಿಸಿ ಕೆತ್ತನೆ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ಕಲೆಗೆ ಈ ಗತಿಯೇ ಎಂದು ಹಿರಿಯ ಕಲಾವಿದರು ವ್ಯಾಪಕ ಟೀಕೆ ಮಾಡಿದ್ದಾರೆ.
ಗಾಂಧಿ ಭವನ ಉದ್ಘಾಟನೆ ಮುಂದೂಡಿಕೆ: ಪ್ರತಿಮೆ ಸರಿಪಡಿಸಲು ನಿರ್ಮಿತಿ ಕೇಂದ್ರಕ್ಕೆ ಡಿಸಿ ಸೂಚನೆ
ಗಾಂಧಿ ಭವನದ ಆವರಣ ದಲ್ಲಿ ನಿರ್ಮಿಸಿದ್ದ ಗಾಂಧೀಜಿಯ ವರ ಪ್ರತಿಕೃತಿಗಳಲ್ಲಿ ವೆತ್ಯಾಸಗಳು ಕಂಡುಬಂದಿರುವ ಹಿನ್ನಲೆಯಲ್ಲಿ ಅವುಗಳನ್ನು ಸರಿಪಡಿಸಿ ನಂತರ ಕಟ್ಟಡ ಉದ್ಘಾಟನೆ ನೆರೆವೇರಿಸಲು ತೀರ್ಮಾನಸಿಲಾಗಿದೆ. ತಕ್ಷಣವೇ ಪ್ರತಿಮೆಗಳನ್ನು ನುರಿತ ಕಾಲವಿದರಿಂದ ಸರಿಪಡಿಸಲು ನಿರ್ಮಿತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅರ್ಚನಾ ಅವರು ಸೂಚನೆ ನೀಡಿದ್ದಾರೆ.
ಪ್ರತಿಮೆಗಳನ್ನು ಸರಿಪಡಿಸಿದ ನಂತರ ಉದ್ಘಾಟನೆ ಮಾಡುವ ಉದ್ದೇಶದಿಂದ ನಾಳೆ ನಿಗಧಿಪ ಡಿಸಿದ್ದ ಗಾಂಧಿ ಭವನ ಉದ್ಘಾಟನೆ ಮುಂದೂಡಲಾಗಿದೆ. ವಾರ್ತಾ ಮತ್ತು ಸಾರ್ವಜ ನಿಕ ಸಂಪರ್ಕ ಇಲಾಖೆ ಆಯುಕ್ತ ರಾದ ಹರ್ಷ ಅವರೂ ಸಹ ಕಲಾಕೃತಿಗಳು ಸರಿಪಡಿಸಿದ ನಂತರ ಕಟ್ಟಡ ಉದ್ಘಾಟನೆ ನೆರವೇರಿಸುವಂತೆ ಸೂಚನೆ ನೀಡಿದ್ದಾರೆ.