ಆಲೂರು: ತಾಲ್ಲೂಕಿನ ಬೈರಾಪುರ ಗ್ರಾಮದ ರಾತ್ರಿ ವೇಳೆ ಕಳ್ಳರು ಕೈಚಳಕ ತೋರಿಸಿದ್ದು ಅಂಗಡಿ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಚಿಲ್ಲೆರೆ ಹಣ ಮತ್ತು ಮಾರಾಟಕ್ಕಿಟ್ಟಿದ್ದ ಸಿಗರೇಟ್ ಸೇರಿದಂತೆ ಅಪಾರ ಪ್ರಮಾಣದ ಶಾಬೂನೂಗಳನ್ನು ಹೊತ್ತೊಯ್ದಿದ್ದಾರೆಂದು ಹೇಳಲಾಗುತ್ತಿದೆ. ಕೃಷ್ಣರಾಜು ಎನ್ನುವವರ ಅಂಗಡಿ ಕಳುವಾಗಿದೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಆಲೂರು, ಬೈರಾಪುರ,ಮಗ್ಗೆ, ರಾಯರಕೊಪ್ಪಲು, ಪಿ .ಹೊಸಕೋಟೆ ಸುತ್ತಮುತ್ತ ಸರಳಿ ಕಳ್ಳತನ ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆಂತಕ ಉಂಟುಮಾಡಿದೆ. ತಾಲ್ಲೂಕು ಕೇಂದ್ರದಿಂದ ಬೈರಾಪುರ ಗ್ರಾಮ ಕೇವಲ ಎರಡು ಕಿ.ಮೀಟರ್ ಇದ್ದರೂ ಕೂಡ, ಕಳೆದ ಆರು ಏಳು ತಿಂಗಳಿನಿಂದ ನಾಲ್ಕರಿಂದ ಐದು ಕಾರುಗಳು,ಬೈಕುಗಳು ಕಳವಾಗಿವೆ ಹಾಗೆಯೇ ಅಂಗಡಿ ಮುಂಗಟ್ಟುಗಳ ಕಳ್ಳತನ ಹೆಚ್ಚಾಗುತ್ತಿವೆ, ಕಳೆದು ಹೋಗಿದ್ದ ಎರಡು ಕಾರುಗಳು ಕೇರಳದಲ್ಲಿ ಸಿಕ್ಕಿರುತ್ತವೆ.
ಬೆಂಗಳೂರು ಮಂಗಳೂರಿನ ಮುಖ್ಯ ಹೆದ್ದಾರಿಯಲ್ಲಿರುವ ಬೈರಾಪುರದಲ್ಲಿ ಈ ಮೊದಲು ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಇತ್ತು ,ಆದರೆ ರಸ್ತೆ ಅಗಲಿಗರಣದಿಂದಾಗಿ ಚೆಕ್ ಪೋಸ್ಟ್ ತೆರವುಗೋಳಿಸಿದ ಕಾರಣ ರಾತ್ರಿ ಹತ್ತು ಗಂಟೆಯ ನಂತರ ಜನರ ಓಡಾಟ ಕಡಿಮೆಯಾಗಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚುತ್ತವೆ ಇದು ಕಳ್ಳತನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಪೋಲೀಸ್ ಸಿಬ್ಬಂದಿಗಳು ರಾತ್ರಿ ವೇಳೆ ಎರಡ್ಮೂರು ಬಾರಿ ಬೀಟ್ ಪೋಲಿಸ್ ಬಂದು ಹೋದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ತೋಡಿಕೊಂಡರು.
ಸಿಸಿಕ್ಯಾಮರ ಅಳವಡಿಸಲು ಒತ್ತಾಯ : ಬೈರಾಪುರ ಗ್ರಾಮ ಇತ್ತೀಚೆಗೆ ಕಳ್ಳತನ ಪ್ರಕರಣ,ಅನೈತಿಕ ತಾಣವಾಗಿದ್ದು ಇದು ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂಬಂಧಪಟ್ಟ ಹಿರಿಯ ಪೋಲಿಸ್ ಅಧಿಕಾರಿಗಳು ಬೀಟ್ ಹೆಚ್ಚು ಮಾಡಿ ಸಿಸಿ ಕ್ಯಾಮರಾ ಅಳವಡಿಸಬೇಕು ಸಾರ್ವಜನಿಕರು ಒತ್ತಾಯ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದೇರೀತಿ ಮುಂದುವರಿದರೇ ಪೋಲಿಸ್ ಅಧಿಕಾರಿಗಳ ವೈಫಲ್ಯದ ವಿರುದ್ಧ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.