News Karnataka Kannada
Saturday, May 11 2024
ಹಾಸನ

ಸಕಲೇಶಪುರ: ರಸ್ತೆ ದುರಸ್ತಿಗೆ ಎರಡು ತಿಂಗಳು ಗಡುವು ನೀಡಿದ ವಳಲಹಳ್ಳಿ ಗ್ರಾಮಸ್ಥರು

sakleshpur-valalahalli-villagers-give-two-months-deadline-to-repair-roads
Photo Credit : News Kannada

ಸಕಲೇಶಪುರ: ತಾಲ್ಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಶುಕ್ರವಾರ ಸಕಲೇಶಪುರ ತಾಲೂಕು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ರಸ್ತೆ ದುರಸ್ತಿಗೆ ಎರಡು ತಿಂಗಳು ಗಡುವ ಕೊಡುವ ಮೂಲಕ ಎಚ್ಚರಿಕೆ ನೀಡಿದರು.

ಸಕಲೇಶಪುರದಿಂದ ಹೆತ್ತೂರು ಕಡೆಗೆ ಮಾರ್ಗ ಕಲ್ಪಿಸುವ ಈ ಡಾಂಬರ್ ರಸ್ತೆಯು ಕಳೆದ ಎರಡು ವರ್ಷಗಳಿಂದ ಪೂರ್ಣವಾಗದ ಕೆಲಸದಿಂದ ನೊಂದ ಪ್ರಯಾಣಿಕರು ,ಗ್ರಾಮಸ್ಥರು ಸೇರಿ ಗುತ್ತಿಗೆ ದಾರರು ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಪರಿಸ್ಥಿತಿ ಉಂಟಾಗಿದೆ.

ಎರಡು ವರ್ಷಗಳಿಂದಲೂ ಬೇರೆ ಬೇರೆ ಕಾರಣಗಳನ್ನು ಹೇಳುವ ಮೂಲಕ ದಿನದೊಡುತ್ತಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ದುರಸ್ತಿಯಾಗದ ರಸ್ತೆಯ ಅನಾನುಕೂಲಗಳನ್ನು ವಿವರಿಸಲು, ಗ್ರಾಮಸ್ಥರು ಶುಕ್ರವಾರ ಬೆಳೆಗಾರರ ಸಂಘಕ್ಕೆ ಇಂಜಿನಿಯರ್ ವೆಂಕಟೇಶ್, ಗುತ್ತಿಗೆದಾರರಾದ ಅಶೋಕ್ ಎಂ ಬಾಳಿ, ಂಇಇ ಮೋಹನ್ ಕುಮಾರರನ್ನು ಕರೆಸಿ ದುರಸ್ತಿಯಾಗದ ರಸ್ತೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ವಿವರಿಸುತ್ತಾ ಇನ್ನ ಎರಡು ತಿಂಗಳಲ್ಲಿ ಈ ಭಾಗದಲ್ಲಿ ಮಳೆ ಶುರುವಾಗಲಿದ್ದು ಕೆಲಸ ಈಗ ಪೂರ್ಣವಾಗದಿದ್ದರೆ ಮತ್ತೆ ಒಂದು ವರ್ಷ ಕೆಲಸ ಪ್ರಾರಂಭಿಸಲು ಬೇಕಾಗುತ್ತದೆ. ಹೀಗಾಗಿ ಕೂಡಲೇ ಸ್ಥಗಿತಗೊಳಿಸಿರುವ ಕೆಲಸಕ್ಕೆ ಚಾಲನೆ ನೀಡುವ ಮೂಲಕ ಎರಡು ತಿಂಗಳಲ್ಲಿ ರಸ್ತೆ ದುರಸ್ತಿ ಮಾಡು ವುದರ ಜೊತೆಗೆ ನಾಗರಿಕರಿಗೆ ಸಹಾಯವಾಗುವಂತ ಕೆಲಸ ಮಾಡಬೇಕೆಂದು ತಿಳಿಸಿದರು .”ಇಲ್ಲವಾದರೆ ಸಂಬಂಧ ಪಟ್ಟ ಕಚೇರಿಗೆ ಬೀಗ ಹಾಕಿ ರಸ್ತೆ ತಡೆ ಮಾಡಬೇಕಾಗುತ್ತದೆ .”ಎಂದು ಗ್ರಾಮಸ್ಥರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರು ಅದ ಅಶೋಕ್. ಎಂ ಬಾಳಿ ಹಾಗೂ ಸಹಾಯಕ ಇಂಜಿನಿಯರ್ ಮೋಹನ್ ಕುಮಾರ್ ಗ್ರಾಮಸ್ಥರಿಗೆ “ನಾಳೆಯಿಂದ ಕೆಲಸ ಶುರು ಮಾಡಿ ಗ್ರಾಮಸ್ಥರು ಹೇಳಿರುವಂತೆ ಎರಡು ತಿಂಗಳು ಒಳಗೆ ಪೂರ್ಣಗೊಳಿಸಿ ಸಂಚಾರಕ್ಕೆ ವ್ಯವಸ್ತೆ ಮಾಡಿಕೊಡಲಾಗುವುದು”. ಇಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಪಿ ಕೃಷ್ಣೇಗೌಡ ,ವಳಲಹಳ್ಳಿ ಬೆಳೆಗಾರರ ಸಂಘದ ಗೌರವ ಅಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ, ಉಪಾಧ್ಯಕ್ಷರಾದ ವಿ.ಪಿ ವಿಶ್ವನಾಥ್,ಹೆತ್ತೂರು ಕೃಷಿ ಪತ್ತಿನ ಅಧ್ಯಕ್ಷರಾದ ವಸಂತ್, ಜಿಲ್ಲಾ ಡಿಎಸ್‌ಎಸ್ ಅಧ್ಯಕ್ಷರಾದ ವಳಲಹಳ್ಳಿ ವೀರೇಶ್,ಪತ್ರಕರ್ತರು ಹಾಗೂ ಸಕಲೇಶಪುರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಕರಡಿಗಾಲ ಅರುಣ್ ಗೌಡ, ರಮೇಶ್ , ಗ್ರಂಥಪಾಲಕರಾದ ಮೂರ್ತಿ ಸೇರಿದಂತೆ ವಳಲಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸ್ಥರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು