ಆಲೂರು: ತಾಲೂಕಿನ ಹುಣಸೆ ಗ್ರಾಮದ ವೇದಾವತಿ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು ೬೦೦ ಪಡಿತರ ಚೀಟಿಗಳಿದ್ದು ಪಡಿತರ ವಿತರಣೆ ಸರಿಯಾಗಿ ನಿರ್ವಹಣೆಯಾಗದೆ ಜನರು ಕಣ್ಣೀರಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ದಿನಗಳಿಂದಲೂ ಕೂಡ ವೇದಾವತಿ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ತೂಕದಲ್ಲಿ ಮೋಸ ಒಂದು ಪಡಿತರ ಚೀಟಿಗೆ ರೂ ೧೦ ಅಂತೆ ೬೦೦ ಪಡಿತರ ಚೀಟಿಗಳಿಗೆ ೬,೦೦೦ ರೂಗಳನ್ನು ಬಡವರಿಂದ ಪಡೆಯುತ್ತಿದ್ದಾರೆ ಹಾಗೂ ಸರಿಯಾದ ಸಮಯದಲ್ಲಿ ಹೆಬ್ಬೆಟ್ಟು ತೆಗೆದುಕೊಳ್ಳದೆ ಸಾರ್ವಜನಿಕಳನ್ನು, ಕೂಲಿ ಕಾರ್ಮಿಕರನ್ನು, ಸತಾಯಿಸ್ತಾ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೂಡಲೇ ಆಹಾರ ನಿರೀಕ್ಷಕರು ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಗ್ರಾಹಕರಿ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸಂಘಟನೆಯ ಮುಖಂಡರುಗಳು ಎಚ್ಚರಿಸಿದ್ದಾರೆ.