News Karnataka Kannada
Wednesday, May 01 2024
ಹಾಸನ

ಆಲೂರು: ಡಾಕ್ಟರ್ ಇಲ್ಲದೆ ಕೆ.ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಖಾಲಿ ಖಾಲಿ

Alur: K Hoskote Primary Health Centre empty without doctor
Photo Credit : News Kannada

ಆಲೂರು: ಸರ್ಕಾರ ಬಡ ರೋಗಿಗಳಿಗೆಂದು ಕೋಟಿ ಕೋಟಿ ಹಣ ಖರ್ಚು ಮಾಡಿ ಹೈ ಕ್ವಾಲಿಟಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿದ್ರೆ, ವೈದ್ಯರು ಮಾತ್ರ ಯಾವುದೇ ಮಾಹಿತಿ ನೀಡದೆ ತಮ್ಮಿಷ್ಟಕ್ಕೆ ರಜೆ ಹಾಕಿಕೊಂಡು ಕರ್ತವ್ಯಕ್ಕೆ ಬಾರದೆ ರೋಗಿಗಳು ಪರದಾಡುವಂತೆ ಮಾಡುತ್ತಿದ್ದಾರೆ. ವೈದ್ಯರ ಈ ನಿರ್ಲಕ್ಷ್ಯದಿಂದ ಕೆಲ ರೋಗಿಗಳು ಗಂಟೆಗಟ್ಟಲೇ ಕಾದು ಕಾದು ಸುಸ್ತಾಗಿ ಆಸ್ಪತ್ರೆಯ ಬೋರ್ಡ್ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾರೆ.

ಆಲೂರು ತಾಲ್ಲೂಕಿನ ಕೆ ಹೊಸ ಕೋಟೆ ಹೋಬಳಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಕ್ಷಾಂತರ ರೂಗಳ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಟ್ಟರು ಯಾವುದೇ ಪ್ರಯೋಜನವಿಲ್ಲವೆಂದು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ಕಾರಣ ರೋಗಿಗಳಿಗೆ ನರಕ ಯಾತನೆಯಾಗಿದೆ.

ಆಡಳಿತದಿಕಾರಿಗಳು ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆ ಹೊಸ ಕೋಟೆ ಗ್ರಾಮದ ಧನಂಜಯ್ ಮಾತನಾಡಿ ನಮ್ಮ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಇದ್ದು ಕೆ,ಹೋಬಳಿಯಲ್ಲಿ ಹೆಚ್ಚಿನದಾಗಿ ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಕೊಳ್ಳಲು ಹಣವಿಲ್ಲದೆ, ಅವರಿಗೆ ಸರ್ಕಾರಿ ಆಸ್ಪತ್ರೆಯೆ ಗತಿಯಾಗಿದೆ. ಆದರೆ ಇತ್ತೀಚೆಗೆ ವೈದ್ಯರು ಸರಿಯಾದ ಸಮಯಕ್ಕೆ ಬಾರದೆ ರೋಗಿಗಳಿಗೆ ತೊಂದರೆ ಯಾಗುತ್ತಿದೆ, ಈಗಿರುವ ವೈದ್ಯೆ ವಿದ್ಯಾಶ್ರೀ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರವುದಿಲ್ಲ, ಬಂದರು ರೋಗಿಗಳನ್ನು ಮುಟ್ಟಿ ನೋಡುವುದಿಲ್ಲ, ರೋಗಿಗಳನ್ನು ವಯಸ್ಸಾದವರನ್ನು ಏಕವಚನದಲ್ಲಿ ಹೋಗೂ, ಬಾರೋ “ಎಂದು ಮಾತಾ ನಾಡಿಸುತ್ತಾರೆ, ಈ ಹಿಂದೆ ಇದ್ದ ವೈದ್ಯರು ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಆದರೆ ಈಗಿರುವ ವೈದ್ಯೆ ಆಸ್ಪತ್ರೆಗೆ ಬಂದರೆ ಜನಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಆಸ್ಪತ್ರೆಯಲ್ಲಿರುವ ಕಂಪೌಂಡರ್ಗಳನ್ನು ಬಿಟ್ಟು ರೋಗಿಗಳನ್ನು ನೋಡಿಸುತ್ತಾರೆ, ಕೆಲವು ಖಾಯಿಲೆಗೆ ಇಲ್ಲಿ ಔಷಧಿಯೇ ಇಲ್ಲಾ ಇದರಿಂದ ಇಲ್ಲಿರುವ ಜನರ ಕಷ್ಟ ಹೇಳಾತಿರಾದಾಗಿದ್ದು ಖಾಸಗಿ ಆಸ್ಪತ್ರೆ ಇಲ್ಲದಿದ್ದರೆ ಎಲ್ಲರೂ ಸಾಯಬೇಕಿತ್ತು ಎಂದು ತಾಲ್ಲೂಕು ಆಡಳಿತಕ್ಕೆ ಜನಪ್ರತಿನಿಧಿ ನಗಳಿಗೆ ಹಾಗೂ ಸರ್ಕಾರಿ ವೈದ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ.

ಕೆ.ಹೊಸಕೋಟೆ ಗ್ರಾಮದ ಜೀವನ್ ಮಾತಾನಾಡಿ ಚಿಕೆತ್ಸೆಗಾಗಿ ಬಂದ ರೋಗಿ ಗಳೆಲ್ಲ ವೈದ್ಯರಿಲ್ಲದೆ ಚಿಕೆತ್ಸೆ ದೊರೆಯದೆ ಪರದಾಡುತ್ತಿದ್ದು ಡಾಕ್ಟರ್ ಗಳನ್ನು ಕಾದು ಕಾದು ಕೊನೆಗೆ ಪ್ರತಿಭಟನೆಗೆ ಮುಂದಾಗಿ ದ್ದಾರೆ, ಗ್ರಾಮದಲ್ಲಿ ಅರೋಗ್ಯ ಕೇಂದ್ರವಿದ್ದು ವೈದ್ಯರು ಯಾವುದೇ ಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದಾರೆ, ಇದರ ಮಾಹಿತಿ ತಿಳಿಯದ ನೂರಾರು ರೋಗಿಗಳು, ಗರ್ಭಿಣಿ, ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತರೆ ತಮ್ಮ ಪ್ರಾಣ ಹೋಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈಗಿರುವ ವೈದ್ಯೆ ವಿದ್ಯಾಶ್ರೀ ಕರ್ತವ್ಯಕ್ಕೆಬೆಳಗ್ಗೆ ಹನ್ನೆರಡು ಗಂಟೆಗೆಯಾದರು ಬರುವುದಿಲ್ಲ ಬಂದರು ಹನ್ನೆರೆಡು ಗಂಟೆಮೇಲೆ ಬಂದು ಮೂರು ಗಂಟೆಗೆ ಮನೆಗೆ ಹೋಗುತ್ತಾರೆ,ಇದರಿಂದ ಸಂಜೆ ಮೇಲೆ ಬರುವಂತ ರೋಗಿಗಳು ಎಮರ್ಜನ್ಸಿ ಎಂದು ಬಂದ ಗರ್ಭಿಣಿ ಸ್ತ್ರೀಯರಿಗೆ, ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ,ಮತ್ತು ಅವರು ಉಳಿದುಕೊಳ್ಳಲು ಕ್ವಾಟ್ರಾಸ್ ವ್ಯವಸ್ಥೆ ಮಾಡಿಕೊಡುತ್ತಿವೆ ಎಂದರೆ ಅದು ಸರಿಯಿಲ್ಲ ಇದು ಸರಿ ಇಲ್ಲವೆಂದು ಇಲ್ಲ ಸಲ್ಲದ ನೆಪ ಹೇಳುತ್ತಾರೆ,ಮೊದಲೇ ನಮ್ಮ ಭಾಗದಲ್ಲಿ ಕಾಡಾನೇ ಸಮಸ್ಯೆ ಹೆಚ್ಚಾಗಿದ್ದು ತೀರಾಗಾಡದ ಪರಿಸ್ಥಿತಿ ಉಂಟಾಗಿದೆ ಈಗಿರುವಾಗ ಇದ್ದ ಈ ಒಂದು ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ, ನಾವು ಏನು ಮಾಡಬೇಕೇಂಬುದೇ ತಿಳಿಯುತ್ತಿಲ್ಲ,ಇ ನ್ನೂ ತೀವ್ರ ಅಸ್ವವಸ್ಥೆ ಆದವರು ಗರ್ಭಿಣಿಯರ ಪಾಡು ದೇವರೇ ಬಲ್ಲ,

ಇನ್ನ ಡಾ, ವಿದ್ಯಾಶ್ರೀ ನಮ್ಮ ಆರೋಗ್ಯ ಕೇಂದ್ರಕ್ಕೆ ಬಂದು ಒಂದು ವರ್ಷ ವಾದರೂ ಇದುವರೆಗೂ ಒಂದು ಹೆರಿಗೆ ಮಾಡಿಸಿಲ್ಲ, ಕೇಳಿದರೆ ಇಲ್ಲಿ ಆಗು ವುದಿಲ್ಲವೆಂದು ಹಾಸನಕ್ಕೆ ಕಳಿಸುತ್ತಾರೆ, ಇನ್ನ ನರ್ಸ್ಗಳನ್ನು ಕೇಳಿದರೆ ಅವರ ಕೆಲಸದಲ್ಲಿ ಅವರು ಬ್ಯುಸಿ ಯಾಗಿರುತ್ತಾರೆ ಹಾಗಾಗಿ ಇಲ್ಲಿ ಬೇರೆ ವೈದ್ಯರನ್ನು ನೇಮಕ ಮಾಡಿ ಇಲ್ಲದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ಆಸ್ಪತ್ರೆ ಮುಭಾಂಗ ಕುಳಿತು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು