News Karnataka Kannada
Wednesday, May 08 2024
ಹಾಸನ

ಆಲೂರು: ಸಮಸ್ಯೆಗಳ ಆಗರ, ವಿದ್ಯುತ್ ಕಚೇರಿಗೆ ಬೀಗ ಹಾಕಿ ರೈತರ ಆಕ್ರೋಶ

Alur: Farmers lock down electricity office, protest against problems
Photo Credit : News Kannada

ಆಲೂರು: ವಿದ್ಯುತ್ ವ್ಯತ್ಯಯದಿಂದ ರೈತರು ಕೆ ಇ ಬಿ ಕಚೇರಿಗೆ ಮುತ್ತಿಗೆ ಹಾಗೂ ಬೀಗ ಹಾಕಿಸಿ ಅಧಿಕಾರಿಗಳನ್ನು ಹೊರಗಡೆ ನಿಲ್ಲಿಸಿರು ಘಟನೆ ಇಂದು ನಡೆದಿದೆ.

ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಇಂದು ಆಲೂರು ತಾಲ್ಲೂಕಿನ ಕೆ ಇ ಬಿ ಕಚೇರಿ ಮುಂದೆ ಹೊಸೂರು ಗ್ರಾಮಸ್ಥರು ಮುತ್ತಿಗೆ ಹಾಕಿ ಕೆ,ಇ, ಬಿ,ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು.

ತಾಲ್ಲೂಕಿನಲ್ಲಿ ದಿನನಿತ್ಯ ರೈತರು ಬಂದು ಕಚೇರಿ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡರು ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನದೇ ರೈತರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತಿಲ್ಲ, ಹಾಗೂ ಕಳೆದ ಎಂಟು ದಿನಗಳಿಂದ ಕುಡಿಯಲು ನೀರಿಲ್ಲದೆ ಅಡುಗೆ ಮಾಡಲು ನೀರಿಲ್ಲದೆ ಕೆರೆಯನ್ನು ನೀರನ್ನು ಕುಡಿಯುತ್ತಿದ್ದೇವೆ ಎಂದು ಮಾಧ್ಯಮದವರೊಂದಿಗೆ ತಮ್ಮ ಆಳಲನ್ನು ಹಂಚಿಕೊಂಡರು.

ಕಾರ್ಯಪಾಲಕ ಇಂಜಿನಿಯರ್ ನಿರಂಜನ್ ಹಾಗೂ ಜೀವನ್ ಅವರನ್ನು ವಜಾ ಮಾಡಿ ಇಲ್ಲದಿದ್ದರೆ ಕಛೇರಿ ಮುಂದೆ ಉಗ್ರಹೋರಾಟದ ಜೋತೆಗೆ ಉಪವಾಸ ಸತ್ಯಗ್ರಹ ಮಾಡುತ್ತಿವೆ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ನಮ್ಮ ಹೊಸೂರು ಗ್ರಾಮಸ್ಥರಿಗೆ ಒಂದೇ ಒಂದು ಟ್ರಾನ್ಸಾಫಾರ್ಮ್ ನ್ನು ನೀಡಿದ್ದು ಅದನ್ನು ಏಕಾಏಕಿ ಯಾರಿಗೂ ಹೇಳದೆ ಕೇಳದೆ ವಿದ್ಯುತ್ ನ್ನು ಸಂಪರ್ಕವನ್ನು ಕಡಿತ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ತುಂಬಾ ತೊಂದರೆಯಾಗಿದೆ ಹಾಗೂ ರಾತ್ರಿವೇಳೆ ವಿದ್ಯುತ್ ಇಲ್ಲದೆ ಮಕ್ಕಳು ಓದುವುದಕ್ಕೂ ತೊಂದರೆಯಾಗುತ್ತಿದೆ. ಈಗಾಗಿ ನಾವು ಕೆ, ಇ, ಬಿ ಅಧಿಕಾರಿಗಳಿಗೆ ಕರೆ ಮಾಡಿದರೆನಿರಂಜನ್ ದುರಂಕಾರದಿಂದ ಮಾತಾನಾಡುತ್ತಾರೆ. ಇನ್ನೂ ಜೀವನ್ ಅವರನ್ನು ಕೇಳಿದರೆ ನನಗು ಅದಕ್ಕೂ ಸಂಬಂಧವಿಲ್ಲ ನೀವು ಇಂಜಿನಿಯರ್ ನಿರಂಜನ್ ಅವರಿಗೆ ಮಾಡಿ ಎನ್ನುತ್ತಾರೆ. ಅವರಿಗೆ ಕರೆ ಮಾಡಿದರೆ ಫೋನ್ ರಿಸೀವ್ ಮಾಡುವುದಿಲ್ಲ ನಾವು ಯಾರನ್ನು ಕೇಳಬೇಕು ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ.

ಶಾಸಕರ ಗಮನಕ್ಕೆ ಈ ವಿಷಯ ತಿಳಿಸಿ ಅವರು ಸಮಸ್ಯೆ ಬಗ್ಗೆ ಕರೆ ಮಾಡಿ ಅಧಿಕಾರಿಗಳಿಗೆ ಹೇಳಿದರು ಇತ್ತಾ ಕಡೆ ಯಾರು ಬಂದು ಸುಳಿದಿಲ್ಲ ಸಮಸ್ಯೆಯನ್ನು ಬಗೆಹರಿಸುತಿಲ್ಲ ನಮಗೆ ನ್ಯಾಯಬೇಕು ಇಲ್ಲ ಇಂತ ಬೇಜವಾಬ್ದಾರಿತನದ ಅಧಿಕಾರಿಯನ್ನು ವಜಾಗೊಳಿಸಬೇಕೆಂದರು.

ಹೊಸೂರು ಗ್ರಾಮಸ್ಥ ಮಾತಾನಾಡಿ ನಮಗೆ ಬೆಳೆ ಬೆಳೆಯಲು ಒಂದೇ ಒಂದು ಟ್ರಾನ್ಸ್ಫರ್ಮ್ ನ್ನು ಅಳವಡಿಸಿದ್ದು ರೈತರು ಸಂಕಷ್ಟಕ್ಕಿಡಾಗಿದ್ದಾರೆ, ಸುತ್ತ ಮುತ್ತಲು ಗ್ರಾಮದ ಜಮೀನಿನಲ್ಲಿ ಸುಮಾರು ೪೦ ಬೋರುವೆಲ್ ಗಳು ಇದ್ದು,ವಿದ್ಯುತ್ ಬಂದಾಗ ಎಲ್ಲರು ಅದನ್ನೇ ಅವಲಂಬಿಸಿದ್ದಾರೆ, ಆದರೆ ಒಂದೇ ಬಾರಿ ಮೋಟಾರ್ ನ್ನು ಆನ್ ಮಾಡಿದಾಗ ಓವರ್ ಲೋಡ್ ನಿಂದ ಟ್ರಾನ್ಸ್ಫಫಾರ್ಮ್ ಸುಟ್ಟು ಹೋಗುತ್ತಿದೆ, ಎಂದು ಮಾಧ್ಯಮದವರೊಂದಿಗೆ ರೈತರು ತಮ್ಮ ಆಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಹೊಸೂರು ಗ್ರಾಮ, ಪಂಚಾಯಿತಿ ಸದಸ್ಯ ನಂದೀಶ್, ಗುರು, ನಟೇಶ್, ಅನಿಲ್ ಗಣೇಶ್, ಮೂರ್ತಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು