ಚಾಮರಾಜನಗರ: ತಾಲೂಕಿನ ಚಿಕ್ಕಹೊಳೆ ಜಲಾಶಯಕ್ಕಿಳಿದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಚೆಂದುಕಟ್ಟೆಮೋಳೆ ಗ್ರಾಮದ ಕುಮಾರ್ ಎಂಬುವರ ಪುತ್ರಿ ಸೌಂದರ್ಯ(15) ಮೃತ ದುರ್ದೈವಿ. ಮೃತ ಸೌಂದರ್ಯ ತನ್ನ ಸ್ನೇಹಿತೆಯರೊಂದಿಗೆ ಜಲಾಶಯ ನೋಡಲು ತೆರಳಿದ್ದಳು.
ಈ ವೇಳೆ, ಈಜಲು ಬಾರದಿದ್ದರೂ ನೀರಿಗೆ ಇಳಿದಿದ್ದಾಳೆ. ಈ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದರಿಂದ ಈಜಲಾಗದೆ ಮುಳುಗಿದ್ದಾಳೆ. ಆಕೆಯ ಗೆಳತಿ ನೀಡಿದ ಮಾಹಿತಿ ಮೇರೆಗೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಶವವನ್ನು ಪ್ರಕರಣ ದಾಖಲಿಸಿಕೊಂಡು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ನೀಡಿದ್ದಾರೆ.