ಮೈಸೂರು: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ವಾಹನದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿರುವ ಘಟನೆ ನಗರದ ಹೈವೈ ಸರ್ಕಲ್ ಬಳಿಯ ಜೋಡಿ ತೆಂಗಿನಮರದ ರಸ್ತೆಯಲ್ಲಿ ನಡೆದಿದೆ.
ನಗರದ ಬನ್ನಿಮಂಟಪದ ಶ್ರೀನಿವಾಸ್ ಟಾಕೀಸ್ ಬಳಿಯಿರುವ ಹುದಾ ಪಬ್ಲಿಕ್ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಮಾರುತಿ ಓಮ್ನಿ ಎಂಜಿನ್ ಬಳಿ ಬೆಂಕಿ ಹೊತ್ತಿಕೊಳ್ಳುತ್ತಿದ್ದದನ್ನು ಎದುರಿನಿಂದ ಬರುತ್ತಿದ್ದ ವಾಹನ ಸವಾರರೊಬ್ಬರು ಗಮನಿಸಿ, ಚಾಲಕನಿಗೆ ತಿಳಿಸಿದ್ದಾರೆ. ಚಾಲನ ತಕ್ಷಣ ಓಮ್ನಿ ನಿಲ್ಲಿಸಿ ಒಳಗೆ ಇದ್ದ ಶಾಲಾ ಮಕ್ಕಳನ್ನು ಕೆಳಗಿಳಿಸಿದ್ದಾನೆ.
ಅಷ್ಟರಲ್ಲಿ ಬೆಂಕಿ ಒಳಭಾಗಕ್ಕೆ ಆವರಿಸಿಕೊಂಡಿದ್ದು, ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ನೀರು ಹಾಕಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.