ಮೈಸೂರು: ಮನೆಯ ಒಳಗೆ ಬಂದ ಹಾವನ್ನ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಹಾವನ್ನ ಬಿಡುವ ವೇಳೆ ಹಾವು ಕಚ್ಚಿ ಮೃತ ಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದಲ್ಲಿ ನಡೆದಿದೆ.
ಹೀಗೆ ತಾನು ಹಿಡಿದ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟ ಉರಗ ಪ್ರೇಮಿ ಕೃಷ್ಣ (೨೮) ಈತ ನಂಜನಗೂಡು ತಾಲ್ಲೂಕಿನ ನೇರಳೆ ಗ್ರಾಮದ ನಿವಾಸಿಯಾಗಿದ್ದು ಗ್ರಾಮದ ರಾಮಶೆಟ್ಟಿ ಎಂಬುವರ ಮನೆಗೆ ರಾತ್ರಿ ನಾಗರಹಾವೊಂದು ಕಾಣಿಸಿಕೊಂಡಿದೆ.
ತಕ್ಷಣ ಉರಗ ಪ್ರೇಮಿಯಾದ ಕೃಷ್ಣ ಅವರಿಗೆ ಕರೆ ಮಾಡಿದ್ದಾರೆ. ಅಲ್ಲಿಗೆ ಬಂದ ಕೃಷ್ಣ ಹಾವನ್ನು ಹಿಡಿದು ಡಬ್ಬಿಯಲ್ಲಿ ಹಾಕಿಕೊಂಡು ಗ್ರಾಮದ ಹೊರವಲಯಕ್ಕೆ ಬಿಡಲು ಕೊಂಡುಹೋಗಿದ್ದು ಡಬ್ಬಿಯಿಂದ ಹಾವನ್ನ ಹೊರ ತೆಗೆಯುವ ವೇಳೆ ಹಾವು ಕೃಷ್ಣ ಕೈಗೆ ಕಚ್ಚಿದೆ. ತಕ್ಷಣ ಆ ಹಾವನ್ನ ಹೊಡೆದು ಸಾಯಿಸಿದ್ದಾನೆ ನಂತರ ಅಸ್ವಸ್ಥಗೊಂಡ ಈತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.