ಮೈಸೂರು: ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದಲ್ಲಿ ಗಾಂಜಾ ಮಾರಾಟ ಮಾಡುವ ದೊಡ್ಡ ದಂಧೆಯೇ ಕಾರ್ಯಾಚರಿಸುತ್ತಿದ್ದು, ಈ ಪೈಕಿ ಆಗೊಮ್ಮೆ, ಈಗೊಮ್ಮೆ ಕೆಲವು ಆರೋಪಿಗಳು ಸಿಕ್ಕಿ ಬೀಳುತ್ತಾರೆ. ಇದೀಗ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ಅಜ್ಮಲ್ ಖಾನ್(40),ಸೈಯದ್ ಆಸಿಫ್(33) ಹಾಗೂ ವಾಹಿದ್ ಪಾಷಾ(31) ಎಂಬುವರೇ ಗಾಂಜಾ ಮಾರಾಟ ಮಾಡಿ ಸಿಕ್ಕಿ ಬಿದ್ದವರು. ಈ ಮೂವರು ಆರೋಪಿಗಳು ತಮ್ಮ ಬಳಿ ಸುಮಾರು 30 ಸಾವಿರ ಮೌಲ್ಯದ 1 ಕೆ.ಜಿ.750 ಗ್ರಾಂ ತೂಕದ ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದರು.
ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ.ಡಿಸಿಪಿ ಪ್ರದೀಪ್ ಗಂಟಿ ಮಾರ್ಗದರ್ಶನದಲ್ಲಿ, ಎಸಿಪಿ ಶಶಿಧರ್ ರವರ ಉಸ್ತುವಾರಿಯಲ್ಲಿ ಉದಯಗಿರಿ ಠಾಣೆಯ ನಿರೀಕ್ಷಕರಾದ ಪಿ.ಕೆ.ರಾಜು,ಎಸ್ಸೈಗಳಾದ ಸುನಿಲ್, ನಾಗರಾಜ್ ನಾಯಕ್ ಮತ್ತು ಸಿಬ್ಬಂದಿ ಶಂಕರ್, ಸಿದ್ದೀಖ್ ಅಹಮದ್, ಸೋಮಶೇಖರ್, ಆನಂದ್ ಕುಮಾರ್, ಸಾಜಿಯಾಬಾನು, ಮೋಹನ್ ಕುಮಾರ್, ಶಿವರಾಜಪ್ಪ, ಸಮೀರ್ ಪಟೇಲ್ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.