ನಿನ್ನೆ ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆಮಾಡಿದೆ. ಅದರಲ್ಲಿಯೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದರ್ಬಾರ್ ಜೋರಾಗಿದ್ದು, ಆಯುಧಪೂಜೆ ಸಡಗರ ಕಳೆಗಟ್ಟಿದೆ.
ಈ ಬಾರಿಯೋ ಕೊರೋನಾ ಸೋಂಕಿನ ಕಾರಣದಿಂದಾಗಿ ಅರಮನೆ ಆವರಣದಲ್ಲಿಯೇ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನ ಆರಂಭವಾಗಿದ್ದು, ಮಹಾರಾಜರ ಆಯುಧಗಳನ್ನು ಅರಮನೆಯ ಕೋಡಿ ಸೋಮೇಶ್ವರ ದೇಗುಲಕ್ಕೆ ತರಲಾಗಿದೆ.
11 ಗಂಟೆಗೆ ಅರಮನೆ ಬಾಗಿಲಿಗೆ ಪಲ್ಲಕ್ಕಿ ತಂದು ನಿಲ್ಲಿಸಲಾಗುತ್ತದೆ. ಪಲ್ಲಕ್ಕಿಯಲ್ಲಿ ಯುದ್ಧ ಸಲಕರಣೆಗಳು ಇರಲಿವೆ. 11 ರಿಂದ 11:12ರ ಶುಭ ಮಹೂರ್ತದಲ್ಲಿ ಆಯುಧಪೂಜೆ ನಡೆಯಲಿದೆ.
ಆಯುಧ ಪೂಜೆ ಹಿನ್ನೆಲೆ ಬೆಳಗ್ಗೆಯೇ ಆನೆಗಳಿಗೆ ಮಜ್ಜನ ಮಾಡಿಸಲಾಗಿದ್ದು, ಅರಮನೆ ಆವರಣಕ್ಕೆ ಕರೆತರಲಾಗಿದೆ.