ಮೈಸೂರು: ದಸರಾ ಸಡಗರಕ್ಕೆ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಗಜಪಡೆ ಕಲರವ ಆರಂಭವಾಗಿದೆ. ಕಾಡಿನಿಂದ ನಾಡಿಗೆ ಬಂದ ಗಜಪಡೆಗಳಿಗೆ ದಸರಾ ತಾಲೀಮು ಆರಂಭವಾಗಿದೆ.
ಇಂದಿನಿಂದ ಕ್ಯಾಪ್ಟನ್ ಅಭಿಮನ್ಯುಗೆ ತೂಕ ಹೊರಿಸಿ ತಾಲೀಮು ನಡೆಸಲಾಗುತ್ತೆ. ಅಶ್ವತ್ಥಾಮ, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ಚೈತ್ರಾ, ಲಕ್ಷ್ಮೀ ಹಾಗೂ ಕಾವೇರಿ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ನಡೆಸಲಾಗುತ್ತೆ. ಹಂತಹಂತವಾಗಿ ತೂಕ ಹೆಚ್ಚಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ.
ಕಾಡಿನಿಂದ ನಾಡಿಗೆ ಬಂದಿರೋ ಗಜಪಡೆ ಮೈಸೂರು ಅರಮನೆಯ ಒಳಾವರಣದಲ್ಲಿ ಬಿಂದಾಸ್ ಆಗಿ ವಾಕಿಂಗ್ ಮಾಡಿದ್ವು.. ದಸರಾ ಗಜಪಡೆಯ ಕ್ಯಾಪ್ಟನ್ ನೇತೃತ್ವದಲ್ಲಿ ಅಶ್ವತ್ಥಾಮ ಗೋಪಾಲಸ್ವಾಮಿ, ಧನಂಜಯ, ವಿಕ್ರಮ, ಚೈತ್ರಾ ಕಾವೇರಿ ಹಾಗೂ ಲಕ್ಷ್ಮೀ ಹೆಸರಿನ ಆನೆಗಳು ಭರ್ಜರಿಯಾಗಿ ಓಡಾಡಿದ್ವು. ಆದ್ರೆ, ಗಜಪಡೆಯ ನಡಿಗೆ ದೃಶ್ಯ ನೋಡಲು ಜನರಿಗೆ ಅವಕಾಶ ಇರಲಿಲ್ಲ. ಇದ್ರಿಂದ ಜನ ಸ್ವಲ್ಪ ಬೇಸರಗೊಂಡಿದ್ದಾರೆ.