ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಎಂದರೆ ನಾಡಿಗೆ ಹರ್ಷವಾಗುತ್ತದೆ. ಮೈಸೂರಿನ ಅಲಂಕಾರ, ವೈಭೋಗ ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ನಡೆದ ನಾಡ ಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ದಸರಾ ಗೆ ನಾಲ್ಕು ಶತಮಾನದ ಇತಿಹಾಸ ವಿದೆ.ಆಳ ಅರಸ ಕಾಲದಲ್ಲಿ ವೈಭವದಿಂದ ನಡೆಯುತ್ತಿದ್ದ ದಸರಾ ವನ್ನು ಈಗ ಸರ್ಕಾರ ಗಳು ನಡೆಸಿಕೊಂಡು ಬರುತ್ತಿವೆ.
ಕೊರೋನಾ ಸಂಕಷ್ಟ ವಿದ್ದರೂ ದಸರಾ ಸಂಪ್ರದಾಯ ಕ್ಕೆ ಧಕ್ಕೆ ಯಾಗದಂತೆ ಸರಳವಾಗಿ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಕೊರೋನಾ ಕಡಿಮೆ ಯಾಗಿದ್ದರೂ ಮೈ ಮರೆಯುವಂತಿಲ್ಲ. ಅರಮನೆಯ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಿನ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ, ವಿಶೇಷ ದೀಪಾಲಂಕಾರವನ್ನು ಮಾಡಲಾಗಿದೆ ಎಂದು ತಿಳಿಸಿದರು.