News Karnataka Kannada
Monday, May 06 2024
ಮೈಸೂರು

ಕೋಟ್ಯಂತರ ಬೆಲೆ ಬಾಳುವ ಆನೆ ದಂತಗಳ ಹರಾಜು ಬದಲು ಸುಡಲು ತೀರ್ಮಾನ

Photo Credit :

ಕೋಟ್ಯಂತರ ಬೆಲೆ ಬಾಳುವ ಆನೆ ದಂತಗಳ ಹರಾಜು ಬದಲು ಸುಡಲು ತೀರ್ಮಾನ

ಮೈಸೂರು: ಆನೆ ಬದುಕಿದರೂ ಲಕ್ಷ ಸತ್ತರೂ ಲಕ್ಷ ಎಂಬ ಗಾದೆ ಮಾತು ಆನೆ ದಂತಕ್ಕೆ ಇರುವ ಬೆಲೆಯನ್ನು ಈ ಗಾದೆಯ ಮಾತು ಹೇಳುತ್ತದೆ. ಇಂತಹ ದಂತಗಳನ್ನ ನಾಶ ಪಡಿಸಲು ಅರಣ್ಯ ಇಲಾಖೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ.

ಬಂಡೀಪುರ-ನಾಗರಹೊಳೆ ಅರಣ್ಯ ಭಾಗದಲ್ಲಿ ಅಂದಾಜು ನಾಲ್ಕು ಸಾವಿರ ಆನೆಗಳಿವೆ. ಒಂದಿಲ್ಲೊಂದು ಕಾರಣದಿಂದಾಗಿ ಆನೆಗಳು ಪ್ರತಿ ದಿನವೂ ಸಾಯುತ್ತಿವೆ. ಇಂತಹ ಸತ್ತ ಆನೆಗಳ ಮರಣೋತ್ತರ ಪರೀಕ್ಷೆ ನಡೆಸುವ ಅರಣ್ಯ ವೈದ್ಯಧಿಕಾರಿಗಳು ದಂತವನ್ನು ಅದರ ಗಾತ್ರ, ಉದ್ದ, ಅಗಲ, ದಪ್ಪಕ್ಕೆ ಅಳತೆಮಾಡಿ ಹಿರಿಯ ಅಧಿಕಾರಿಗಳ ವಶಕ್ಕೆ ನೀಡುತ್ತಾರೆ. ಇಂತಹ ಸತ್ತ ಆನೆಗಳ ದಂತವನ್ನ ಮೈಸೂರಿನ ಅರಣ್ಯ ಇಲಾಖೆಯಲ್ಲಿರುವ ಉಗ್ರಣದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

ಉಗ್ರಾಣದಲ್ಲಿ ಎಷ್ಟು ಆನೆ ದಂತಗಳಿವೆ?
ಕಳೆದ ಕೆಲವು ವರ್ಷಗಳಿಂದ ಸತ್ತ ಆನೆಯ ದಂತಗಳನ್ನು ಮೈಸೂರಿನ ಅರಣ್ಯ ಭವನದಲ್ಲಿರುವ ಉಗ್ರಣದಲ್ಲಿ ಸಂಗ್ರಹಿಸಡಲಾಗುತ್ತಿದ್ದು ಇಲ್ಲಿವರೆಗೆ 2290 ದಂತಗಳಿದ್ದು ಅದರಲ್ಲಿ ಚಿಕ್ಕದು, ದೊಡ್ಡದು, ಡ್ಯಾಮೆಜ್ ಆಗಿರುವುದು ತೆಗದರೆ 300 ಮಾತ್ರ ಒಳ್ಳೆಯ ದಂತಗಳಿದ್ದು ದೇಶದಲ್ಲಿ ಸುಮಾರು 12 ಟನ್ನಷ್ಟು ಆನೆ ದಂತಗಳು ಇವೆ. ಈ ಆನೆ ದಂತಗಳನ್ನು ಯಾರಿಗೂ ಸಿಗದಂತೆ ನಾಶಪಡಿಸಲು ಆಕ್ಟೋಬರ್ ವೇಳೆಗೆ ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಹೆಸರು ಹೇಳದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೈನ್ಯಕ್ಕೆ ದಂತ:
ಭಾರತೀಯ ಸೇನಾ ಕಚೇರಿಗಳಲ್ಲಿ ಶೃಂಗಾರಕ್ಕೆ ಕಳೆದ ಮೂರು ವರ್ಷಗಳಿಂದ 150-200 ದಂತಗಳನ್ನ ನೀಡಲಾಗಿದ್ದು ಇನ್ನೂ ಹೆಚ್ಚಿನ ಬೇಡಿಕೆ ಬಂದರೆ ನೀಡಲಾಗುವುದು. ಅಲ್ಲದೆ ನಾವು ಕೇಳಿದಾಗ ವಾಪಸ್ಸು ಪಡೆಯಲಾಗುವುದು ಎಂಬ ಕರಾರಿನ ಅನ್ವಯ ನೀಡಲಾಗುವುದು.

ಹರಾಜು ಏಕಿಲ್ಲ?
ಆನೆ ದಂತವನ್ನ ಹರಾಜಿಗೆ ಇಟ್ಟರೆ ಕೋಟ್ಯಂತರ ರೂಪಾಯಿ ಸರ್ಕಾರಕ್ಕೆ ಆದಾಯ ಬರುತ್ತದೆ ಆದರೆ ದಂತಕ್ಕೆ ಇಷ್ಟೊಂದು ಬೆಲೆಯಿದೆ ಎಂದು ಗೊತ್ತಾದರೆ ಆನೆ ಸಂತತಿಯನ್ನೇ ನಾಶ ಮಾಡಬಹುದು ಎಂಬ ಉದ್ದೇಶದಿಂದ ಹರಾಜು ಹಾಕುವುದಿಲ್ಲ ಬದಲಾಗಿ ಅದನ್ನ ಸುಟ್ಟು ಹಾಕಲು ತೀರ್ಮಾನಿಸಿದ್ದು ಅನುಮತಿಗಾಗಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು