ಮೈಸೂರು: ಅಂತರ್ ಧರ್ಮೀಯ ವಿವಾಹಕ್ಕೆ ಸಂಬಂಧಿಸಿದಂತೆ ಪತ್ನಿಯನ್ನು ಕಿಡ್ನಾಪ್ ಮಾಡಿರುವ ಪತ್ನಿಯನ್ನು ತನ್ನ ಜತೆ ಬದುಕಲು ಅವಕಾಶ ಮಾಡಿಕೊಡಬೇಕೆಂದು ತಿ ಕೆ.ಶಿವರಾಜ್ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಡಿಸೆಂಬರ್ 4 ರಂದು ಮೈಸೂರಿನಲ್ಲಿ ತಂದೆಯಿಂದಲೇ ನನ್ನ ಪತ್ನಿ ಹಲೀಮಾ ಕಿಡ್ನಾಪ್ ಆಗಿ ಒಂದು ವಾರ ಕಳೆಯುತ್ತಿದ್ದರು ಆಕೆಯ ಸುಳಿವು ಸಿಕ್ಕಿಲ್ಲ. ಅಲ್ಲದೆ ಆಕೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತಿ ಆಕೆಯನ್ನು ಕಾನೂನಾತ್ಮಕವಾಗಿ ವಿವಾಹವಾಗಿದ್ದು ಅವಳೊಂದಿಗೆ ಗೌರವದಿಂದ ಬದುಕಲು ಅವಕಾಶ ಮಾಡಿಕೊಡಬೇಕೆಂದು ನವದೆಹಲಿಯ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಮಂಗಳೂರಿನ ಶಿವರಾಜ್ ಮತ್ತು ಹಲೀಮ್ ಶಾಹೀನ್ ನಡುವೆ ಪ್ರೇಮಾಂಕುರವಾಗಿ ಆರು ತಿಂಗಳ ಹಿಂದೆ ಕುಟುಂಬದ ವಿರೋಧದ ನಡುವೆ ಮೈಸೂರಿನ ಒಂಟಿಕೊಪ್ಪಲಿನ ದೇವಸ್ಥಾನದಲ್ಲಿ ಗಂಡಿನ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಇವರ ವಿವಾಹವನ್ನು ಪ್ರಶ್ನಿಸಿದ ಹಲೀಮ್ ಶಾಹಿಮ್ ಅವರ ತಂದೆ ಹಮೀದ್ ನನ್ನ ಮಗಳು ಇನ್ನೂ ಅಪ್ರಾಪ್ರೆಯಾಗಿದ್ದು ಅವಳ ವಿವಾಹವನ್ನು ಅಂಗೀಕರಿಸದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಪ್ರೇಮಿಗಳ ಪರ ತೀರ್ಪು ನೀಡಿ ಆಕೆ ಯುವತಿಯಾಗಿದ್ದು ಅವರ ವಿವಾಹವನ್ನು ಅಂಗೀಕರಿಸಿತ್ತು.