News Karnataka Kannada
Sunday, April 28 2024
ಶಿವಮೊಗ್ಗ

ಶಿವಮೊಗ್ಗ: ತಿಪ್ಪೆ ಗುಂಡಿಯ ವಿಚಾರದಲ್ಲಿ ಗಲಾಟೆ, ಮಹಿಳೆ ಸಾವು

ಪರಪ್ಪನ ಅಗ್ರಹಾರದಲ್ಲಿ ಒಂದೇ ಮನೆಯಲ್ಲಿದ್ದ ವಿಚ್ಛೇದಿತ ಮಹಿಳೆ ಬಿಟ್ಟುಹೋಗಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ.18ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Photo Credit : IANS

ಶಿವಮೊಗ್ಗ:  ಅರಳಹಳ್ಳಿ ಗ್ರಾಮದ ತಾಜ್ ಮಸ್ಜೀದ್ ಬೀದಿಯಲ್ಲಿ ನಿವಾಸಿಗಳ ನಡುವೆ ತಿಪ್ಪೆ ಗುಂಡಿಯ ವಿಚಾರದಲ್ಲಿ ಗಲಾಟೆಯಾಗಿದ್ದು ಈ ಗಲಾಟೆಯಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದಾರೆ.

ಅರಳಹಳ್ಳಿಯಲ್ಲಿ ಫಯಾಜ್ ಅಹ್ಮದ್ ಮತ್ತು ಫೆಮೀದಾ ಭಾನು ದಂಪತಿಗಳಿಗೆ ಊರಿನಲ್ಲಿ ಸ್ತಿರಾಸ್ಥಿಯಿಂದ ಬಂದ ಜಮೀನು ಇದ್ದು ತಮ್ಮ ಜಮೀನಿನಲ್ಲಿಯೇ ಮನೆ, ಹಸುವಿನ‌ಕೊಟ್ಟಿಗೆ ಕಟ್ಟಿಕೊಂಡು ಜೀವನ ನಡೆಸಿದ್ದಾರೆ. 45 ವರ್ಷದಿಂದ ಇಲ್ಲೇ ಬಾಳಿ ಬದುಕುತ್ತಿದ್ದ ದಂಪತಿಗಳಿಗೆ 15 ವರ್ಷದಿಂದ ಈಚೆಗೆ, ಹಿಂಬದಿಯ ಮನೆಯ ಅಹ್ಮದ್ ಅಶ್ರಫ್ ಕುಟುಂಬ ಮನೆಯ ಹಿಂಬದಿಯಲ್ಲಿದ್ದ ತಿಪ್ಪೆ ಗುಂಡಿಯ ವಿಚಾರದಲ್ಲಿ ತಕರಾರು ಇತ್ತು.

ಹಸುವಿನ ಮಲಮೂತ್ರಗಳು ತಮ್ಮ ಜಮೀನಿನಲ್ಲಿಯೇ ಇದ್ದ ತಿಪ್ಪೆಗುಂಡಿಗೆ ಹಾಕುತ್ತಿದ್ದ ಕಾರಣದಿಂದ ಅಶ್ರಫ್ ಈ ಗುಂಡಿಗೆ ಏನೂ ಹಾಕಬೇಡಿ ಸೊಳ್ಳೆ ಮೊದಲಾದ ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತೆ ಎಂಬುದು ಅವರ ಅಕ್ಷೇಪವಾಗಿತ್ತು ಎಂದು ಅವರ ಸಹೋದರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮೊನ್ನೆ ಇಬ್ಬರ ನಡುವೆ ಗಲಾಟೆಯಾಗಿದ್ದು ಈ ಗಲಾಟೆಯನ್ನ ಊರಿನ ಹಿರಿಯರು ನಾಳೆ ತೀರ್ಮಾನ ಮಾಡೋಣವೆಂದು ಸೂಚಿಸಿದ್ದರು.

ಆದರೆ ಮರುದಿನವೇ ಫಮೀದಾ ಭಾನು(55) ಜೊತೆ ಅಶ್ರಫ್ ಪತ್ನಿ ನೂರ್ ಸಲ್ಮಾ ಮತ್ತು ತಂಗಿ ಆಸ್ಮಾ ಮೂವರು ಸೇರಿ ಫೆಮೀದಾ ಭಾನು ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದನ್ನ ತಿಳಿದ ಸಹೋದರ ಆಸಿಫುಲ್ಲಾ ಮತ್ತು ಮಗಳು ಫೌಜಿಯಾ ಜಗಳ ಬಿಡಿಸಲು ಬಂದಿದ್ದಾರೆ. ಫೌಜಿಯಾಳನ್ನೂ ಥಳಿಸಿ, ನೂರು ಸಲ್ಮಾ ಕಿವಿಭಾಗದಲ್ಲಿ ಕಚ್ಚಿದ್ದಾರೆ ಎಂದು ಆಸಿಫುಲ್ಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಗಳದಲ್ಲಿ ಸುಸ್ತಾಗಿ ಚರಂಡಿಗೆ ಬಿದ್ದ ಫೆಮೀದಾ ಭಾನು ರನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದರು ಅವರ ಸಾವನ್ನ ದೃಢಪಡಿಸಿದ್ದಾರೆ. ಉದ್ದೇಶ ಪೂರಕವಾಗಿ ಸಹೋದರಿಯ ಕೊಲೆ ಮಾಡಲಾಗಿದೆ ಎಂದು ಸಹೀದರ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು