ಶಿವಮೊಗ್ಗ: ಈ ದಿನ ದಿನಾಂಕ 14-01-2023 ರಂದು ಮಧ್ಯಾಹ್ನ ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಮಿಥುನ್ ಕುಮಾರ್ ಜಿ.ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳ ಸಭೆ ನಡೆಸಲಾಯಿತು. ಸದರಿ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳು ಹಾಜರಿದ್ದರು.
ಅವರುಗಳ ಕುಂದುಕೊರತೆಗಳನ್ನು ಆಲಿಸಿದ ಮಾನ್ಯ ಪೊಲೀಸ್ ಅಧೀಕ್ಷಕರು ಕಾನೂನು ಚೌಕಟ್ಟಿನೊಳಗೆ ಅವರುಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರೆಡ್ಡಿ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಎಎಸ್.ಪಿ ಸಾಗರ ಮತ್ತು ಭದ್ರಾವತಿ, ಡಿಎಸ್.ಪಿ ಶಿವಮೊಗ್ಗ ಎ ಉಪವಿಭಾಗ, ಶಿವಮೊಗ್ಗ ಬಿ ಉಪವಿಭಾಗ, ಶಿಕಾರಿಪುರ ಉಪವಿಭಾಗ, ತೀರ್ಥಹಳ್ಳಿ ಉಪವಿಭಾಗ ಮತ್ತು ಡಿಸಿಆರ್.ಬಿ ಡಿಪಿಓ ರವರು ಹಾಗೂ ಜಿಲ್ಲೆಯ ಎಲ್ಲಾ ಸಿಪಿಐ ಮತ್ತು ಪಿಐ ರವರು ಹಾಜರಿದ್ದರು.