ಚಿಕ್ಕಮಗಳೂರು: ಶೇ.೭೦ ರಷ್ಟು ಪ್ರಾಮಾಣಿಕ ಎಂದು ಹೇಳಿಕೊಂಡಿರುವ ಕಾಂಗ್ರೆಸ್ ಮುಖಂಡ ಎಚ್.ಡಿ.ತಮ್ಮಯ್ಯ ತಾನೊಬ್ಬ ಅಪ್ರಾಮಾಣಿಕ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಸುಧೀರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಟಿಕೆಟ್ ಕೈತಪ್ಪಿ ಹೋಗುತ್ತಿದೆ ಎಂಬ ಭಯದಲ್ಲಿ ಕಾಂಗ್ರೆಸ್ಸಿಗರ ಮೇಲಿನ ಸಿಟ್ಟನ್ನು ಸಿ.ಟಿ.ರವಿ ಅವರ ಮೇಲೆ ತೋರ್ಪಡಿಸುವ ಭರದಲ್ಲಿ ತಾನೊಬ್ಬ ಶೇ.೩೦ ರಷ್ಟು ಅಪ್ರಾಮಾಣಿಕ ಎಂದು ಹೇಳುವ ಮೂಲಕ ಆರಂಭದಿಂದಲೂ ಅಧಿಕಾರ ಕೊಟ್ಟ ಪಕ್ಷಗಳಿಗೆ ವಂಚನೆ ಮಾಡುತ್ತಾ ಬಂದಿದೇನೆ ಎಂದು ಅವರು ಒಪ್ಪಿಕೊಂಡಿದ್ದಾರೆ.
ಅಧಿಕಾರಕ್ಕಾಗಿ ತಾನು ಏರಿದ ಏಣಿಯನ್ನು ತುಳಿಯುತ್ತಾ ಬಂದಿರುವುದೇ ಇವರ ಜಾಯಮಾನ ಎಂದು ಟೀಕಿಸಿದರು. ಈ ಹಿಂದೆ ಎಸ್.ಎಲ್. ಬೋಜೇಗೌಡ, ಮಾಜಿ ಸಚಿವ ಸಗೀರ್ ಅಹ್ಮದ್ ಅವರಿಗೆ ಯಾವರೀತಿ ಮಕ್ ಮಲ್ ಟೋಪಿ ಹಾಕಿದ್ದಾರೆ ಎಂದು ಕ್ಷೇತ್ರದ ಜನತೆಗೆ ಗೊತ್ತಿದೆ ಎಂದರು. ಮುಖಂಡರಾದ ಶ್ರೀನಿವಾಸ, ಹಂಪಯ್ಯ, ಮಹೇಶ್, ಇದ್ದರು.