News Karnataka Kannada
Friday, May 03 2024
ಚಿಕಮಗಳೂರು

ಸಿ.ಟಿ.ರವಿಯೇ ಗೆಲ್ಲೋದು, ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್: ಪಕ್ಷದಿಂದ ವಜಾ

Congress leader's audio goes viral, says CT Ravi will win
Photo Credit : News Kannada

ಚಿಕ್ಕಮಗಳೂರು: ಸಿ.ಟಿ.ರವಿ ಗೆದ್ದೇ ಗೆಲ್ತಾರೆ ಅಂತ ಹೇಳಿದ್ದ ಕಾಂಗ್ರೆಸ್ ಪಕ್ಷದ ಮುಖಂಡನನ್ನು ಹುದ್ದೆಯಿಂದ ವಜಾ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಕಿಸಾನ್  ಸೆಲ್‌ ಅಧ್ಯಕ್ಷ ರಸೂಲ್ ಖಾನ್ ವಜಾ ಆದ ವ್ಯಕ್ತಿ.

ಚಿಕ್ಕಮಗಳೂರಿನಲ್ಲಿ ಈ ಬಾರಿ ಹೇಗಿದ್ರು ಸಿ.ಟಿ ರವಿನೇ ಗೆಲ್ಲೋದು ಸರ್ ಎಂದು ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ಮುಜುಗರ ಎದುರಾಗಿದ್ದು ಈ ಕಾರಣದಿಂದ ರಸೂಲ್ ಖಾನ್ ಅನ್ನು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಅಮಾನತು ಮಾಡಿ ಸಚಿನ್ ಮೀಗಾ ಆದೇಶ ಹೊರಡಿಸಿದ್ದಾರೆ.

ಸಿ.ಟಿ.ರವಿಯೇ ಗೆಲ್ಲೋದು, ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್ : ಫೋನ್‌ನಲ್ಲಿ ಮಾತನಾಡುವ ವೇಳೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿಯೇ ಗೆಲ್ಲೋದು ಎಂದು ಹೇಳಿದ್ದ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಸೂಲ್ ಖಾನ್‌ರನ್ನ ಕಾಂಗ್ರೆಸ್ ಪಕ್ಷ ದಿಂದ ಪಕ್ಷದಿಂದ ಉಚ್ಛಾಟನೆ ಮಾಡಿದೆ. ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಸೂಲ್ ಖಾನ್ ಕಾಂಗ್ರೆಸ್ ಪಕ್ಷದ ಸಕ್ರಿಯ  ಕಾರ್ಯಕರ್ತನಾಗಿದ್ದರು. ಒಂದು ದಿನದ ಹಿಂದಷ್ಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿದ್ದರು.

ಟಿಕೆಟ್‌ಗಾಗಿ ಅರ್ಜಿ ಹಾಕಿರುವ ಆರು ಜನರಲ್ಲೇ ಒಬ್ಬರಿಗೆ ಟಿಕೆಟ್ ನೀಡ ಬೇಕು. ನಿನ್ನೆ-ಮೊನ್ನೆ ಪಕ್ಷಕ್ಕೆ ಸೇರಿ ಕೊಂಡು ತಮ್ಮಯ್ಯಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್  ಅನ್ನು ಬೆಂಬಲಿಸುವುದಿಲ್ಲ ಎಂದು ತಮ್ಮಯ್ಯ ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ್ದರು.  ಅದೇರೀತಿ ಶುಕ್ರವಾರ ಫೋನಿನಲ್ಲಿ ಮಾತನಾಡುತ್ತಾ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಯೇ ಗೆಲ್ಲೋದು ಎಂದು ಹೇಳಿದ್ದರು.  ಎನ್ನಲಾದ ಆಡಿಯೋ ವೊಂದು ವೈರಲ್ ಆಗಿದ್ದು, ಆ ಆಡಿಯೋ ಹಿನ್ನೆಲೆ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿದ್ದಾರೆ. ಆಡಿಯೋದಲ್ಲಿ ಎಸ್.ಡಿ.ಪಿ.ಐ. ಪಕ್ಷ ಇಲ್ವಾ. ಅಭ್ಯರ್ಥಿ ಹಾಕಿ. ಮುಸ್ಲಿಂ ಮತಗಳು ಚದುರುತ್ತವೆ. ನೀವು ಅಭ್ಯರ್ಥಿ ಹಾಕಿ ನಿಮ್ಮ ಶಕ್ತಿ ತೋರಿಸಿ. ಸಿ.ಟಿ.ರವಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾನೆ ಎಂದು ಹೇಳಿದ್ದಾರೆ. ಈ ಆಡಿಯೋ ಇಂದು ವೈರಲ್ ಆಗಿದ್ದು, ಪಕ್ಷಕ್ಕೆ ಮುಜುಗರ ತಂದರೆಂಬ ಕಾರಣದಿಂದ ಅವರನ್ನ ಅಮಾನತು ಮಾಡಿದ್ದಾರೆ.

 ಸ್ಪಷ್ಟೀಕರಣ : ಈ ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿಭಟನೆಯನ್ನು ಮಾಡುತ್ತಾ, ಸಾರ್ವಜನಿಕವಾಗಿ ಪ್ರತಿಯೊಂದು ಸಮುದಾಯದಲ್ಲೂ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅತಿ ಹೆಚ್ಚಾಗಿ ಸಿ.ಟಿ ರವಿನ ವಿರೋಧಿಸುತ್ತಾ ಬಂದಿದ್ದೀನಿ ಇದಕ್ಕೆ ಸಿಕ್ಕ ಪ್ರತಿಫಲ ಸುಮಾರು ೭ ಕೇಸ್ ಆಗಿದೆ. ನಮಗೂ ಅಧಿಕಾರದ ಆಸೆ ಇದೆ, ನಾವೇ ಇಲ್ಲಿ ಗೆಲ್ಲಬೇಕು ಸಿ.ಟಿ.ರವಿ ಸೋಲಿಸಬೇಕು ಅಂತ ಇಷ್ಟು ವರ್ಷದಿಂದ ಕಷ್ಟಪಟ್ಟು ನಮ್ಮ ಮೇಲೆ ಕೇಸ್ ಹಾಕಿಕೊಂಡು ಬಂದಿದ್ದೀವಿ ಆದರೆ ಯಾರೋ ಹೊರಗಡೆಯಿಂದ ಬಂದವರಿಗೆ ಅವಕಾಶ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಆ ಬೇಸರದ ವಿಚಾರವಾಗಿ ನಾನು ಮಾತನಾಡಿದ್ದು ಅವಾಗ ನಾನು ಹೇಳಿದ್ದೆ ಸಿ.ಟಿ ರವಿ ಸೋಲ್ತಾನೆ ಆದರೆ ನಮ್ಮ ಒಳ ಜಗಳಕ್ಕೆ, ಕಾರ್ಯಕರ್ತರ ಕಡೆಗಣನೆ ಗೆ, ನಾಯಕರ ಕಡೆಗಣನೆಗೆ ಈ ತರ ಆಗ್ತಾ ಇದೆ, ನಾಳೆ ದಿನ ಸಿ.ಟಿ ರವಿ ಗೆಲ್ಲೋ ಚಾನ್ಸ್ ಇದೆ ಅದಕ್ಕೆ ನಾವು ಚಾನ್ಸ್ ಕೊಡಬಾರದು ಅಂತ ಹೇಳಿದನ್ನ ಇವರು ತಿರುಗಿಸಿ ಬೇರೆ ರೀತಿಯಲ್ಲಿ ತೋರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು