News Karnataka Kannada
Friday, May 03 2024
ಚಿಕಮಗಳೂರು

ಕಾಂಗ್ರೆಸ್‌ಗೆ ವೋಟ್‌ ಹಾಕುವಂತೆ ಜೆಡಿಎಸ್‌ ಮುಖಂಡ ತಾಕೀತು, ತರಾಟೆ ಆಡಿಯೋ ವೈರಲ್‌

Activist's class for Boje Gowda: Audio goes viral
Photo Credit : News Kannada

ಚಿಕ್ಕಮಗಳೂರು: ಪಕ್ಷವಿರೋಧಿ ಚಟುವಟಿಕೆ ಖಂಡಿಸಿ ಕಾರ್ಯಕರ್ತರೋರ್ವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರಿಗೆ ದೂರವಾಣಿ ಮೂಲಕ  ತರಾಟೆಗೆ ತೆಗೆದು ಕೊಂಡಿರುವ ಆಡಿಯೋವೊಂದು ವೈರಲ್ ಆಗಿದೆ.

ಚಿಕ್ಕಮಗಳೂರು ಕ್ಷೇತ್ರದ ಜೆಡಿಎಸ್‌ನ ನಾಯಕರು ಮತ್ತು ಎರಡನೇ ಹಂತದ ಮುಖಂಡರುಗಳು ಬಹಿರಂಗ ಪಕ್ಷ ವಿರೋಧಿ    ಚಟುಟಿಕೆಗಳಲ್ಲಿ ತೊಡಗಿದ್ದರೂ ರಾಜ್ಯ ಮಟ್ಟದ ವರಿಷ್ಠರು ಚಕಾರವೆತ್ತದ ಕಾರಣ ಕಣದಲ್ಲಿರುವ ಪಕ್ಷದ ಅಧಿ ಕೃತ ಅಭ್ಯರ್ಥಿ ಕಂಗಾಲಾಗಿದ್ದಾರೆ.

ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರು ಪಕ್ಷದ ಅಭ್ಯರ್ಥಿ ಕಣದಲ್ಲಿ ದ್ದಾಗ್ಯೂ ತಮ್ಮ ನಿವಾಸದಲ್ಲೇ ತಮ್ಮ ದೇ ಪಕ್ಷದ ಕಾರ್ಯಕರ್ತರಿಗೆ ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕುವಂತೆ ತಾಕೀತು ಮಾಡಿದ ವೀಡಿಯೋ ವೈರಲ್ ಆಗಿತ್ತು. ಇದೀಗ ಪಕ್ಷವಿರೋಧಿ ಚಟುವಟಿಕೆ ಖಂಡಿಸಿ ಕಾರ್ಯಕರ್ತರೋರ್ವರು ಎಸ್. ಎಲ್.ಬೋಜೇಗೌಡರಿಗೆ ದೂರವಾಣಿ ಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ವೊಂದು ವೈರಲ್ ಆಗಿದೆ.

ಕೊಲ್ಲಪ್ಪ ಮಾತನಾಡುತ್ತೇನೆ ಎಂದು ಪರಿಚಯಿಸಿಕೊಳ್ಳುವ ವ್ಯಕ್ತಿ ನೀವು ಒಬ್ಬ ರಾಜಕಾರಣಿ ಆಗಿ ಈರೀತಿ ಫೋನ್ ಮಾಡುವುದು ನಿಮಗೆ ಶೋಭೆ ತರುತ್ತದಾ? ನೀವು ಚುನಾವಣೆಗೆ ನಿಂತಾಗ ಕೊಲ್ಲಪ್ಪ ನಾನು ನಿಂತಿದ್ದೇನೆ ನನಗೇನಾದರೂ ಸಹಾಯ ಮಾಡು ಎಂದರೆ ಪರ ವಾಗಿಲ್ಲ. ಅವನ್ಯಾವನಿಗೋ ಕೇಳಿದರೆ ಅದು ಸರಿಯಾಗುತ್ತಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ಬೋಜೇಗೌಡರು ಆಯ್ತು ಬಿಡಪ್ಪ ನಿನಗೆ ಇಷ್ಟವಿಲ್ಲವಾದರೆ ಬಿಡು. ಏನೋ ಅಭಿ ಮಾನದಲ್ಲಿ ಕೇಳಿದ್ದೇನೆ ಎನ್ನುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ವ್ಯಕ್ತಿ ಕೆಲವು ವೈಯಕ್ತಿ ವಿಚಾರಗಳನ್ನೂ ಪ್ರಸ್ತಾಪಿಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಾರೆ.

ಈ ಆಡಿಯೋ ಬೆಳಗ್ಗೆ ವೈರಲ್ ಆಗಿ ಸ್ವಲ್ಪ ಸಮಯದಲ್ಲೇ ಪಕ್ಷದ ಎರಡನೇ ಹಂತದ ಮುಖಂಡರೆಂದೇ ಗುರುತಿಸಿಕೊಂಡಿರುವ ನಗರಸಭೆ ಮಾಜಿ ಅಧ್ಯಕ್ಷ ಶಾಂತಕುಮಾರ್, ಮಾಜಿ ಸದಸ್ಯ ದೇವೀಪ್ರಸಾದ್ ಸೇರಿ ದಂತೆ ಕೆಲವು ಕಾರ್ಯಕರ್ತರೊಂದಿಗೆ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಬ್ಲಾಕ್ ಅಧ್ಯಕ್ಷ ಮಂಜೇಗೌಡ, ಮುಖಂಡ ಎ.ಎನ್. ಮಹೇಶ್ ಸಭೆ ಮಾಡುತ್ತಿರುವ ಚಿತ್ರ ವೈರಲ್ ಆಗಿದೆ.

ಬೆರಳೆಣಿಕೆಯ ಕೆಲವು ಮುಖಂ ಡರು, ಕಾರ್ಯಕರ್ತರನ್ನು ಹೊರತು ಪಡಿಸಿ ಸಾರಾ ಸಗಟಾಗಿ ಎಲ್ಲರೂ ಬಹಿರಂಗವಾಗಿ ಕೈ ತೆಕ್ಕೆಗೆ ಜಾರುತ್ತಿದ್ದರೂ ಪಕ್ಷದ ಜಿಲ್ಲಾ ಸಮಿತಿಯಾಗಲಿ, ರಾಜ್ಯ ವರಿಷ್ಠರುಗಳಾಗಲಿ ಚಕಾರ ವೆತ್ತದ ಹಿನ್ನೆಲೆಯಲ್ಲಿ ಕಣದಲ್ಲಿ ಉಳಿದಿರುವ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿಗೆ ಅನಾಥ ಭಾವನೆ ಕಾಡಲಾರಂಭಿಸಿದೆ.

ಯಾರೂ ನನ್ನೊಂದಿಗೆ ನಿಲ್ಲದಿದ್ದರೂ ಪರವಾಗಿಲ್ಲ ನಾನು ಚುನಾ ವಣೆ ಮಾಡುತ್ತೇನೆ. ನನಗೆ ಕಾರ್ಯ ಕರ್ತರಿದ್ದಾರೆ ಎಂದು ತಿಮ್ಮಶೆಟ್ಟಿ ಮೂರು ದಿನಗಳ ಹಿಂದೆ ಹೇಳಿದ್ದರೂ ಅಂದಿನಿಂದ ಕ್ಷೇತ್ರದಲ್ಲೆಲ್ಲೂ ಕಾಣುತ್ತಿಲ್ಲ.

ಪಕ್ಷದ ಅಭ್ಯರ್ಥಿ ಬಿ.ಎಂ. ತಿಮ್ಮಶೆಟ್ಟಿ ಅವರಿಗೆ ಬಿ.ಫಾರಂ ನೀಡಿದ ಮರುಕ್ಷಣದಿಂದಲೇ ಅವರ ವಿರುದ್ಧವೇ ಕತ್ತಿ ಮಸೆಯುವ  ಚಟುವಟಿಕೆ ಪಕ್ಷದವರಿಂದಲೇ ಪ್ರಾರಂಭವಾಗಿತ್ತು. ತಿಮ್ಮಶೆಟ್ಟಿ ನಾಮಪತ್ರ ಸಲ್ಲಿಸಲು ಒಂದು ದಿನ ಮೊದಲೇ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಅವರೊಂದಿಗೆ ಜೆಡಿಎಸ್‌ನ ಸ್ಥಳೀಯ ಮುಖಂಡರುಗಳು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮನೆಯಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದರು.

ಈ ಬೆಳವಣಿಗೆಗಳ ಬಗ್ಗೆ ಪಕ್ಷದ ಯಾರೊಬ್ಬರೂ ಪ್ರತಿಕ್ರಿಯಿಸದಿದ್ದರೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಆಗುತ್ತಿದೆ. ಇದೆಂಥಹ ರಾಜ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು