News Karnataka Kannada
Wednesday, May 08 2024
ಚಿಕಮಗಳೂರು

ಚಿಕ್ಕಮಗಳೂರು: ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಕುನ್ನಾಳು ಗ್ರಾಮಸ್ಥರು

Chikkamagaluru: Kunnalu villagers quit JD(S) to join BJP
Photo Credit : News Kannada

ಚಿಕ್ಕಮಗಳೂರು: ತಾಲ್ಲೂಕಿನ ಕುನ್ನಾಳು ಗ್ರಾಮದ ಎಸ್.ಟಿ. ಸಮುದಾಯದ ಅನೇಕ ಮಂದಿ ಮುಖಂಡರು ಹಾಗೂ ಗ್ರಾಮ ಸ್ಥರು ಜೆಡಿಎಸ್ ಪಕ್ಷವನ್ನು ತೊರೆದು ಭಾರತೀಯ ಜನತಾಪಾರ್ಟಿಯ ಸಿದ್ದಾಂತಗಳನ್ನು ಒಪ್ಪಿ ಶಾಸಕರ ಸ್ವಗೃಹದಲ್ಲಿ ಬಿಜೆಪಿ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಶಾಸಕ ಸಿ.ಟಿ.ರವಿ ಸರ್ಕಾರದ ಯೋಜನೆಗಳನ್ನು ಯಾವುದೇ ಜಾತಿ, ಬೇಧವಿಲ್ಲದೇ ಸರ್ವಸಮಾನರಿಗೂ ನೀಡಿರುವ ಏಕೈಕ ಪಕ್ಷ ಬಿಜೆಪಿ. ಇಂತಹ ಹಲವು ಕಾರ್ಯಕ್ರಮಗಳನ್ನು ನೀಡಿ ಹೆಮ್ಮೆಗಳಿಸಿರುವ ಕಾರಣವೇ ವಿವಿಧ ಮುಖಂಡ ರುಗಳು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನಪರ ಯೋಜನೆಗಳನ್ನು ಎಸ್.ಟಿ. ಸಮುದಾಯಕ್ಕೆ ನೀಡುತ್ತಾ ಬಂದಿದೆ. ಇದರಿಂದ ಜನಾಂಗದ ಅಭಿವೃಧ್ದಿಯಾಗಿದೆ. ಇತರರು ಹೇಳುವ ಬೇಡದ ವಿಷಯಗಳಿಗೆ ಕಿವಿಗೊಡದೇ ಸೂಕ್ಷ್ಮವಾಗಿ ಗಮನಿಸಿ ಬಿಜೆಪಿ ಅಭಿವೃದ್ದಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಬಿಜೆಪಿ ಗ್ರಾಮಾಂತರ ಎಸ್ಟಿ ಮೋರ್ಚ ಅಧ್ಯಕ್ಷ ಹೆಚ್.ಎಂ.ಮಧುಕುಮಾರ್ ಮಾತನಾಡಿ ರಾಜ್ಯ ಸರ್ಕಾರವು ಎಸ್.ಟಿ. ಜನಾಂಗಕ್ಕೆ ನೀಡಿರುವ ಮೀಸಲಾತಿ ಹಾಗೂ ಜನಪರ ಯೋಜನೆಗಳ ಕಾರಣವೇ ಇಂದು ಅನೇಕ ಮಂದಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಕುನ್ನಾಳು ಗ್ರಾಮದ ಸುಮಾರು ಇಪ್ಪತ್ತು ಹೆಚ್ಚು ಮಂದಿ ಜೆಡಿಎಸ್ ತೊರೆದು ಬಿಜೆಪಿಯನ್ನು ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ.ಮೋರ್ಚಾ ಲಕ್ಯಾ ಹೋಬಳಿ ಪ್ರಧಾನ ಕಾರ್ಯದರ್ಶಿ ತಮ್ಮೇಗೌಡ ನಗರ ಅಧ್ಯಕ್ಷ ಪ್ರದೀಪ್, ಕುನ್ನಾಳು ಗ್ರಾಮದವರಾದ ರಜಿನೇಶ್ ರವಿ, ಬಸವರಾಜು, ಮಲ್ಲಿಕಾರ್ಜುನ್, ನೇತ್ರಾ, ಲೀಲಾವತಿ ಅಮೈಯಮ್ಮ, ಮಂಜುಳಾ, ಆರತಿ ಸಣ್ಣಮ್ಮ, ಭಾಗ, ನೀಲಮ್ಮ, ನೇತ್ರಾವತಿ, ಶೋಭಾ, ಲತಾ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು