News Karnataka Kannada
Sunday, April 28 2024
ಉತ್ತರಕನ್ನಡ

ಕಾರವಾರ: ಕುಮಟಾದ ಯಕ್ಷಗಾನ ಕಲಾವಿದ ಸುಬ್ರಮಣ್ಯ ಅವರ ಮಡಿಲಿಗೆ ರಾಜ್ಯೋತ್ಸವ ಪ್ರಶಸ್ತಿ

Rajya
Photo Credit : By Author

ಕಾರವಾರ: ಯಕ್ಷಗಾನ ಕಲಾವಿದ ಕುಮಟಾ ತಾಲೂಕಿನ ಧಾರೇಶ್ವರದ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಮೂಲಕ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದಂತಾಗಿದೆ.

ಕಳೆದ ಅನೇಕ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸುಬ್ರಮಣ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಜಿಲ್ಲೆಗೆ ಹರ್ಷದ ಸಂಗತಿಯಾಗಿದೆ. ಅವರ ವಿದ್ಯಾ­ಭ್ಯಾ­ಸವು ಪ್ರಥಮ ಪಿಯು­ಸಿಗೆ ಆಗಿದೆ. ಆಮೇಲೆ ಹೊಟ್ಟೆ­ಪಾಡಿಗಾಗಿ ಎಲೆ­ಕ್ಟ್ರಿಕ್‌ ಕೆಲಸ ಕಲಿತರು. ಯಕ್ಷಗಾನದ ಭಾಗ­ವ­ತರಾದ ಅವರ ಅದೇ ಕ್ಷೇತ್ರದಲ್ಲಿ ಮಿಂಚಿದರು.

ಸಂಗೀ­ತ­ಗಾ­ರ­ನಾ­ಗ­ಬೇ­ಕೆಂ­ದಿದ್ದ ಸುಬ್ರಮಣ್ಯ ಅವರಿಗೆ ಯಕ್ಷ­ಗಾ­ನದ ಭಾಗ­ವ­ತ­ನಾ­ಗ­ಬೇ­ಕಾದ ಸ್ಥಿತಿ ಬಂತು. ದಿ.ಕಾಳಿಂಗ ನಾವುಡ, ಚಿಟ್ಟಾಣಿ ರಾಮ­ಚಂದ್ರ ಹೆಗಡೆ, ದಿ. ದುರ್ಗಪ್ಪ ಗುಡಿ­ಗಾ­ರರು ನನಗೆ ಉತ್ತಮ ಅವ­ಕಾ­ಶ­ಗ­ಳನ್ನು ನೀಡುತ್ತ ನನ್ನ ಬೆಳ­ವ­ಣಿ­ಗೆಗೆ    ಕಾರ­ಣ­ರಾ­ದರು.

ವಿಭಿ­ನ್ನ­ತೆ­ಯನ್ನು ಬಯ­ಸುವ ಮನಸ್ಸು ಸುಬ್ರಮಣ್ಯ ಅವರದ್ದಾಗಿತ್ತು. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಇಟ್ಟು­ಕೊಂಡು  ಯಕ್ಷ­ಗಾ­ನ­ದಲ್ಲೂ ಸಂಗೀ­ತದ ರುಚಿ­ಯನ್ನು ಕಾಣತೊ­ಡ­ಗಿದರು . ಹೃದ­ಯಕ್ಕೆ ಹತ್ತಿ­ರ­ವಿ­ರುವ ಪೌರಾ­ಣಿಕ ಪ್ರಸಂ­ಗ­ಗಳು   ಅನಿ­ವಾ­ರ್ಯ­ವಾಗಿ ಕಡಿಮೆ ಆಗುತ್ತ ಬಂದವು. ಜನ ಬಯ­ಸುವ ಪ್ರಸಂಗ­ಗ­ಳನ್ನು ನೀಡ­ಬೇ­ಕಾದ ಸ್ಥಿತಿ ನಿರ್ಮಾ­ಣವಾ­ಯಿತು. ಸಾಮಾ­ಜಿಕ ಪ್ರಸಂ­ಗ­ಗಳು ಕಿಸೆಗೆ ಹತ್ತಿ­ರ­ವಾ­ಯಿತು. ಅವರು ಮಾಡಿದ ಪ್ರಯೋ­ಗ­ಗ­ಳನ್ನು ಜನ ಒಪ್ಪಿ­ಕೊಂ­ಡರು. ಅಷ್ಟರದಲ್ಲಿ ಯಕ್ಷ­ಗಾ­ನ­ದಲ್ಲಿ ಒಂದು ಹಂತಕ್ಕೆ ಬೆಳೆದಿ­ದ್ದೇನೆ. ಕಳೆದ ವರ್ಷ ಶ್ಯಾಮಲಾ ಭಾವೆ ಅವರ ಶಿಷ್ಯ­ನಾಗಿ ಸಂಗೀತ ಕಲಿ­ಯಲು     ಪ್ರಾರಂ­ಭಿ­ಸಿ­ದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು