ಕಾರವಾರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ವರ್ಗಾವಣೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ದಾಂಡೇಲಿ ಘಟಕ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಉತ್ತಮ ರೀತಿಯಲ್ಲಿ ಕರ್ತವ್ಯ ಸಲ್ಲಿಸಿ ಸಲ್ಲಿಸುತ್ತಿದ್ದಾರೆ. ಅಕ್ರಮ ಚಟುವಟಿಕೆಗಳಾದ ಮಟಕಾ, ಜೂಜು, ಪಬ್ ಗಳಿಗೆ ಹಾಕಿದ್ದಾರೆ. ಅನೇಕ ಯುವಕರು ದುಶ್ಚಟಕ್ಕೆ ಬಲಿ ಆಗುವುದು ತಪ್ಪಿಸಿದ್ದಾರೆ. ಬಡ ಜನರನ್ನು ನಿಷ್ಠೆಯಿಂದ ಜೀವನ ಮಾಡಲು ದಾರಿಯಾಗಿದ್ದಾರೆ. ಇಂಥ ನಿಷ್ಠಾವಂತ ಅಧಿಕಾರಿಯನ್ನು ಕೆಲ ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಗಳ ಕರ್ತವ್ಯ ಅವಧಿ ಮುಗಿಯದಿದ್ದರೂ ಸಹ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಿದ್ದನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಲಾಗಿದೆ.
ಒಂದು ವೇಳೆ ಸರಕಾರಕ್ಕೆ ಸಲ್ಲಿಸಿದ ಮವಿಗೆ ಸ್ಪಂದಿಸದೆ ಇದ್ದರೇ ಮುಂದಿನ ದಿನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟ ಬಣದ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪ್ರವೀಣ ಕೊಠಾರಿ, ಕಾರವಾರ ತಾಲೂಕಾಧ್ಯಕ್ಷ ಅಕ್ಷಯ ಎಸ್.ಪಿ. ಮಂಜುನಾಥ ಪಂತೋಜಿ, ಸಂದೀಪ ಭಂಡಾರಿ, ಪ್ರಸಾದ ಮಡಿವಾಳ, ಅಜಯ ಬಾನಾವಳಿ, ಗಗನ ಗೋವೇಕರ್, ಪ್ರಸಾದ ನಾಯ್ಕ ಇದ್ದರು.