ಕಾರವಾರ: ಕಳೆದ ಒಂದು ವರ್ಷದಿಂದ ಉತ್ತರ ಕನ್ನಡ ಎಸ್ ಪಿಯಾಗಿದ್ದ ಡಾ. ಸುಮನ್ ಪೆನ್ನೇಕರ್ ಅವರು ವರ್ಗಾವಣೆಯಾಗಿದ್ದು ನೂತನ ಎಸ್ಪಿಯಾಗಿ ಎನ್. ವಿಷ್ಣುವರ್ಧನ ಅವರನ್ನು ಸರಕಾರ ನೇಮಕ ಮಾಡಿದೆ.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಸ್ ಪಿ ಡಾ. ಸುಮನ್ ಪೆನ್ನೇಕರ್ ವಿಶೇಷ ವಿಭಾಗ- ಎಸ್ ಪಿ ಸ್ಕ್ಯಾಡ್ ಮೂಲಕ ಅಕ್ರಮ ಚಟುವಟಿಕೆಗಳ ಜಾಲಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಜಿಲ್ಲೆಯ ಹಲವು ರಾಜಕಾರಣಿಗಳು ಅವರ ವರ್ಗಾವಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಚರ್ಚೆಯ ನಡುವೆ ಡಾ. ಸುಮನ್ ಪೆನ್ನೇಕರ್ ಅವರನ್ನು ಈಗ ವರ್ಗಾವಣೆ ಮಾಡಲಾಗಿದೆ.