ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಜಿಲ್ಲೆಯ ಗ್ರಾಮ ಪಂಚಾಯಿತಿಯ ವಾಟರ್ಮನ್ಗಳು ಎಚ್ಆರ್ಎಂಎಸ್ ಮೂಲಕ ವೇತನ ಪಾವತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಧರಣಿಗೆ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟವೂ ಬೆಂಬಲ ಸೂಚಿಸಿದೆ.
ಸರಕಾರವು ೨೦೧೭ರಲ್ಲಿ ಪಂಚಾಯಿತಿ ನೌಕರರನ್ನು ಪಂಚತಂತ್ರದಲ್ಲಿ ಅಳವಡಿಸಲು ಆದೆಶ ನೀಡಿದೆ. ಜತೆಗೆ ೨೦೨೧ ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ನಗದು, ಚೆಕ್,ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ಪಾವತಿಸುವುದನ್ನು ನಿಷೇಧಿಸಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ೨ ರಿಂದ ೬ ಜನ ವಾಟರ್ಮೆನ್ಗಳಿದ್ದು, ಇವರಿಗೆ ನಗದು, ಚೆಕ್, ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೂಡಲೇ ಈ ರೀತಿ ವೇತನ ಪಾವತಿಸುವುದನ್ನು ತಡೆಹಿಡಿದು ಸರ್ಕಾರದ ಆದೇಶದಂತೆ ಆನಲೈನ್ ಪಂಚತಂತ್ರ ೨.೦ ಮೂಲಕ ಸಿಬ್ಬಂದಿಗಳ ವೇತನ ಪಾವತಿಸಬೇಕು. ಅಲ್ಲದೆ ಈವರೆಗೂ ಆದೇಶ ಪಾಲಿಸದ ಜಿಲ್ಲಾ ಪಂಚಾಯಿತಿ ಸಿಇಓ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾಯಿತ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಹಾಗೂ ಯಲ್ಲಾಪುರ ತಾಲೂಕಾಧ್ಯಕ್ಷ ಎಂ.ಕೆ.ಭಟ್ ಯಡಳ್ಳಿ, ಡಾ.ಶ್ರೀನಿವಾಸ ರಾಯ್ಕರ್, ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ, ಜಾವಿದ್ ವಾಗಿನಕೋಡು, ಮಾದೇಶ ಹುಲ್ಲೂರು, ಮೆಹಬೂಬ್ ಮುಲ್ಲಾ, ಮಂಜುನಾಥ ಬೋವಿ, ಸುರೇಶ್ ಕರ್ಜಗಿ, ಈರಪ್ಪ ಬೆನಕಣ್ಣನವರ, ಇಸ್ಮಾಯಿಲ್ ಮರುಸಾಬ, ಜಯಪ್ಪ ಕಲಕರಡಿ ಮುಂತಾದವರು ಇದ್ದರು.