News Karnataka Kannada
Tuesday, May 07 2024
ಉತ್ತರಕನ್ನಡ

ಕಾರವಾರ: ಡಿಸಿ ಕಚೇರಿ ಬಳಿ ನಾಲ್ಕನೇ ದಿನಕ್ಕೆ ಕಾಲಿಸಿದ ಧರಣಿ

Dharna near DC's office enters fourth day
Photo Credit : By Author

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಜಿಲ್ಲೆಯ ಗ್ರಾಮ ಪಂಚಾಯಿತಿಯ ವಾಟರ್‌ಮನ್‌ಗಳು ಎಚ್‌ಆರ್‌ಎಂಎಸ್ ಮೂಲಕ ವೇತನ ಪಾವತಿಗೆ ಆಗ್ರಹಿಸಿ ಅನಿರ್ಧಿಷ್ಟಾವಧಿಯ ಧರಣಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಧರಣಿಗೆ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟವೂ ಬೆಂಬಲ ಸೂಚಿಸಿದೆ.

ಸರಕಾರವು ೨೦೧೭ರಲ್ಲಿ ಪಂಚಾಯಿತಿ ನೌಕರರನ್ನು ಪಂಚತಂತ್ರದಲ್ಲಿ ಅಳವಡಿಸಲು ಆದೆಶ ನೀಡಿದೆ. ಜತೆಗೆ ೨೦೨೧ ರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ನಗದು, ಚೆಕ್,ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ಪಾವತಿಸುವುದನ್ನು ನಿಷೇಧಿಸಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ೨ ರಿಂದ ೬ ಜನ ವಾಟರ್‌ಮೆನ್‌ಗಳಿದ್ದು, ಇವರಿಗೆ ನಗದು, ಚೆಕ್, ಡಿ.ಡಿ, ನೆಪ್ಟ್, ಆರ್ಟಿಜಿಎಸ್ ಮೂಲಕ ವೇತನ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೂಡಲೇ ಈ ರೀತಿ ವೇತನ ಪಾವತಿಸುವುದನ್ನು ತಡೆಹಿಡಿದು ಸರ್ಕಾರದ ಆದೇಶದಂತೆ ಆನಲೈನ್ ಪಂಚತಂತ್ರ ೨.೦ ಮೂಲಕ ಸಿಬ್ಬಂದಿಗಳ ವೇತನ ಪಾವತಿಸಬೇಕು. ಅಲ್ಲದೆ ಈವರೆಗೂ ಆದೇಶ ಪಾಲಿಸದ ಜಿಲ್ಲಾ ಪಂಚಾಯಿತಿ ಸಿಇಓ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾಯಿತ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಹಾಗೂ ಯಲ್ಲಾಪುರ ತಾಲೂಕಾಧ್ಯಕ್ಷ ಎಂ.ಕೆ.ಭಟ್ ಯಡಳ್ಳಿ, ಡಾ.ಶ್ರೀನಿವಾಸ ರಾಯ್ಕರ್, ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸದಾಶಿವ ಚಿಕ್ಕೊತ್ತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಂಗಮೇಶ್ವರ, ಜಾವಿದ್ ವಾಗಿನಕೋಡು, ಮಾದೇಶ ಹುಲ್ಲೂರು, ಮೆಹಬೂಬ್ ಮುಲ್ಲಾ, ಮಂಜುನಾಥ ಬೋವಿ, ಸುರೇಶ್ ಕರ್ಜಗಿ, ಈರಪ್ಪ ಬೆನಕಣ್ಣನವರ, ಇಸ್ಮಾಯಿಲ್ ಮರುಸಾಬ, ಜಯಪ್ಪ ಕಲಕರಡಿ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು