ಕಾರವಾರ: ಬೆಂಗಳೂರಿಗೆ ವರ್ಗಾವಣೆಯಾದ ಉತ್ತರ ಕನ್ನಡ ಜಿಲ್ಲಾಕಾರಿ ಮುಲ್ಲೈ ಮುಗಿಲನ್ ಅವರಿಗೆ ಜಿಲ್ಲಾಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಬೀಳ್ಕೊಡಲಾಯಿತು. ಮುಲ್ಲೈ ಮುಗಿಲನ್ ಮತ್ತು ಅವರ ಪತ್ನಿ ಅಶ್ವಿನಿ ಅವರನ್ನೂ ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ಮುಲ್ಲೈ ಮುಗಿಲನ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಈ ವೇಳೆ ಮುಲ್ಲೈ ಮುಗಿಲನ್ ಮತ್ತು ನೂತನ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಶುಭಕೋರಿದರು. ಎಸ್ ಪಿ ಸುಮನಾ ಪೆನ್ನೇಕರ್ ಮಾತನಾಡಿ, ಮುಲ್ಲೈ ಮುಗಿಲನ್ ಅವರು ಮತ್ತು ತಾವು ಒಂದೇ ಬ್ಯಾಚ್ ನವರು. ಹಾಗಾಗಿ ಈ ಜಿಲ್ಲೆಗೆ ಬಂದ ಮೇಲೆ ಒಳ್ಳೆಯ ಪ್ರೆಂಡ್ ಸಿಕ್ಕಿದ್ದರು ಎಂದರು.
ಜಿಪಂ ಸಿಇಒ ಪ್ರಿಯಾಂಗಾ ಎಂ. ಮಾತನಾಡಿ, ಜಿಲ್ಲಾ ಪಂಚಾಯಿತಿ ಯೋಜನೆಗಳಿಗೆ ಇದ್ದ ಸಾಕಷ್ಟು ತೊಂದರೆಗಳನ್ನು ನಿವಾರಿಸಲು ಡಿಸಿ ಮುಲ್ಲೈ ಮುಗಿಲನ್ ಅವರು ಸಹಕಾರ ನೀಡಿದ್ದಾರೆ. ಕೋವಿಡ್ ಕಾಲದಲ್ಲಿ ಸ್ವಲ್ಪವೂ ವಿಚಲಿತರಾಗದೆ ಧೈರ್ಯದಿಂದ ಕೆಲಸ ಮಾಡಿದ್ದಾರೆ. ಮುಂದಾಲೋಚನೆ ಇರುವ ವ್ಯಕ್ತಿ ಎಂದರು.
ಹೆಚ್ಚುವರಿ ಜಿಲ್ಲಾಕಾರಿ ರಾಜು ಮೊಗವೀರ ಅವರು ಮಾತನಾಡಿ, ಡಿಸಿ ಮುಲ್ಲೈ ಮುಗಿಲನ್ ಅವರು ವಿಭಿನ್ನ ಆಲೋಚನೆ ಹೊಂದಿದ್ದಾರೆ. ಕೋವಿಡ್ ಕಾಲದಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯ ಇಲ್ಲದ ಜಿಲ್ಲೆಯಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಕಚೇರಿ ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ನೋಡುತ್ತಾರೆ. ರೆವೆನ್ಯೂ ಮ್ಯಾನೇಜ್ಮೆಂಟ್ ಉತ್ತಮವಾಗಿ ತಿಳಿದಿರುವ ಜಿಲ್ಲಾಕಾರಿ ಆಗಿದ್ದರು.
ಡಿಎಫ್ಒ ಪ್ರಶಾಂತ ಕೆ.ಡಿ ಮಾತನಾಡಿ, ಜಿಲ್ಲೆಯಲ್ಲಿ ೧೯೭೨ ಪೂರ್ವದ ಅತಿಕ್ರಮಣದಾರರಿಗೆ ಅವರ ಹೆಸರಿಗೆ ಭೂಮಿ ಕೊಡಲು ಕೇಂದ್ರ ಸರಕಾರ ಒಪ್ಪಿಗೆ ಕೊಟ್ಟಿತ್ತು. ತಾಂತ್ರಿಕ ಕಾರಣದಿಂದ ೨೦ ವರ್ಷಗಳಿಂದ ಅದು ಅನುಷ್ಠಾನ ಆಗಿರಲಿಲ್ಲ. ಮುಲ್ಲೈ ಮುಗಿಲನ್ ಅವರ ಆಸಕ್ತಿಯಿಂದ ಅದು ಮಹತ್ವದ ಹಂತಕ್ಕೆ ಬಂದಿದೆ ಎಂದು ನೆನೆಸಿಕೊಂಡರು. ಬಳಿಕ ಜಿಲ್ಲೆಯ ಎಲ್ಲಾ ಉಪ ವಿಭಾಗೀಯ ಅಧಿಕಾರಿಗಳು ಮಾತನಾಡಿ ಅನಿಸಿಕೆಗಳನ್ನು ಹಂಚಿಕೊಂಡರು. ಜಿಲ್ಲೆಯ ನೂತನ ಜಿಲ್ಲಾಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಹಾಗು ತಾಲೂಕು ಮಟ್ಟದ ಅಕಾರಿಗಳು ಹಾಗು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಇದ್ದರು.