ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್ನಲ್ಲಿ ಒಟ್ಟೂ 14,402 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಡಿ.ಎಸ್. ವಿಜಯ ಕುಮಾರ ತಿಳಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು.
ಲೋಕ್ ಅದಾಲತ್ನಲ್ಲಿ ಇತ್ಯರ್ಥಕ್ಕಾಗಿ ಒಟ್ಟು 20,844 ಪ್ರಕರಣಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಇತ್ಯರ್ಥವಾದ ಇತರ ಕ್ರಿಮಿನಲ್ 5718 ಪ್ರಕರಣಗಳು ಸೇರಿ ಒಟ್ಟು 14,402 ಪ್ರಕರಣಗಳಲ್ಲಿ 24.30 ಕೋಟಿ ರೂ. ಮೊತ್ತದ ಪ್ರಕರಣ ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚಿನ ವ್ಯಾಜ್ಯಗಳನ್ನು ಲೋಕ್ ಅದಾಲತ್ ಮೂಲಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿಯೂ ಅದಾಲತ್ ಬಗ್ಗೆ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕರುಣೆ ಹಾಜರಿದ್ದರು.
ಯಾವ ಪ್ರಕರಣ ಎಷ್ಟು ಇತ್ಯರ್ಥ
* ರಾಜಿಯಾಗಬಲ್ಲ ಅಪರಾಧ- 54 (2.88 ಲಕ್ಷ ರೂ.)
* ಚೆಕ್ ಬೌನ್ಸ್ – 464 (7.14 ಕೋಟಿ ರೂ.)
* ಬ್ಯಾಂಕ್ ಕೇಸ್- 8 (7.47 ಲಕ್ಷ ರೂ.)
* ವಾಹನ ಅಪಘಾತ- 68 (3.93 ಕೋಟಿ ರೂ.)
* ವೈವಾಹಿಕ ಕೇಸ್- 4
* ಗಣಿ ಸಂಬಂಧಿಸಿದ ಕೇಸ್- 14 (6.75 ಲಕ್ಷ ರೂ.)
* ಇತರ ಸಿವಿಲ್ ಕೇಸ್- 424 (11.33 ಕೋಟಿ ರೂ.)
* ಇತರ ಕ್ರಿಮಿನಲ್ ಕೇಸ್- 5718 (69.69 ಲಕ್ಷ ರೂ.)
* ವ್ಯಾಜ್ಯ ಪೂರ್ವ ಪ್ರಕರಣ- 7648 (1.02 ಕೋಟಿ ರೂ.)