ಕುಂದಾಪುರ: ಬೈಂದೂರು ವಿಧಾನಸಭೆ ಕ್ಷೇತ್ರದ ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತಲೂ ಕಾಡು ಪ್ರದೇಶದಿಂದ ಆವೃತ್ತವಾಗಿದೆ ಈ ಭಾಗದಲ್ಲಿ ಚಿರತೆ ಸೇರಿದಂತೆ ಕಾಡು ಹಂದಿಗಳ ಉಪಟಳ ಅಧಿಕವಿದೆ, ಮಕ್ಕಳ ಪೋಷಕರಿಗೆ ವನ್ಯ ಮೃಗಗಳದ್ದೆ ಹೆದರಿಕೆ.ಮಕ್ಕಳ ರಕ್ಷಣೆ ದೃಷ್ಟಿಯಿಂದ ಶಾಲೆಯ ಸುತ್ತಾ ಮುತ್ತಲೂ ಕಪೌಂಡ್ ರಚನೆ ಮಾಡಬೇಕ್ಕೆನ್ನುವುದು ಮಕ್ಕಳ ಪೋಷಕರ ಬೇಡಿಕೆ.
ಶಾಲೆಯ ಸುತ್ತಾಮುತ್ತಾ ಬೀದಿ ನಾಯಿಗಳ ಕಾಟ ಅಧಿಕವಾಗಿದ್ದು ಶಾಲೆಯ ಆವರಣದೊಳಗೆ ಟಿಕ್ಕಾಣಿ ಹೂಡಿವೆ,ಬಿಸಿ ಊಟದ ಸಮಯದಲ್ಲಿ ಮಕ್ಕಳ ಬೆನ್ನ ಹಿಂದೆ ಓಡಾಡುವ ನಾಯಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕಾಗಿದೆ.1 ರಿಂದ 5 ನೇ ತರಗತಿ ವರಗೆ ಇರುವ ಕಟ್ಟಿನಮಕ್ಕಿ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಇದ್ದಾರೆ,ಎಚ್ಎಂ ಕಚೇರಿ ಕೆಲಸಕ್ಕೆ ಹೊರಗೆ ಹೋದರೆ ಸಹಾಯಕ ಶಿಕ್ಷಕಿ ಒಬ್ಬರೆ 5ನೇ ತರಗತಿ ವರೆಗೆ ಪಾಠ ಮಾಡಬೇಕಾದ ಪರಿಸ್ಥಿತಿ ಇದೆ. ಹೊಸ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಆಗಿ ಒಂದು ಶಿಕ್ಷಕಿಯನ್ನು ನೇಮಕ ಮಾಡಲು ಕ್ರಮಕೈಗೊಳ್ಳಬೇಕ್ಕೆನ್ನುವುದು ಶಾಲಾ ಎಸ್ಡಿಎಂಸಿ ಅವರ ಒತ್ತಾಯವಾಗಿದೆ.