ಕಾರ್ಕಳ: ಜಗತ್ತಿನ ಮೊದಲ ಪರಶುರಾಮನ ಮೂರ್ತಿ ಕರುಣಿಸಿದ ಕೀರ್ತಿ,ದೂರದೃಷ್ಟಿಯ ನಾಯಕ ಸುನೀಲ್ ಕುಮಾರ್ ಎಂದು ಗಣೇಶ್ ಕಾರ್ಣಿಕ್ ಬಣ್ಣಿಸಿದರು.
ಅವರು ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಭಜನಾ ಮಂದಿರ ಉದ್ಘಾಟನೆ ಯ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಕಳ ಉತ್ಸವದ ಮಾಡುವ ಮೂಲಕ ಅಯಾಮ ರಾಜ್ಯದಲ್ಲಿ ವಿವಿದೆಡೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ಸವವನ್ನು ಏರ್ಪಡಿಸುತಿದ್ದಾರೆ ಅದಕ್ಕಾಗಿ ಸಚಿವರು ಎಲ್ಲಾ ಕಾರ್ಕಳ ಉತ್ಸವ ಹಾಗು ಪರಶುರಾಮನ ಥೀಂ ಪಾರ್ಕ್ ಮೂಲಕ ಅರ್ಥಿಕ ಚಟುವಟಿಕೆಗಳ ಪುನಶ್ಚೇತನ ಕ್ಕೆ ಸಾಕ್ಷಿಕರಿಸಿದೆ ಎಂದರು .
ಅದ್ಯಕ್ಷ ತೆ ವಹಿಸಿದ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ಆದ್ಯಾತ್ಮಿಕ ಭಾವನೆ ಹಾಗೂ ಧಾರ್ಮಿಕ ಭಾವನೆ ಉಂಟಾಗಿದೆ . ಭಜನಾ ಕಾರ್ಯಕ್ರಮ ಮೂಲಕ ಪಾವನವಾಗಿದೆ. ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳ ಒಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಮುಖ್ಯ ಪ್ರವಾಸಿತಾಣವಾಗಿ ಮೂಡಿಬರಲು ನಿಮ್ಮ ಸಹಕಾರ ಬೇಕು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ , ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ,ಬೈಲೂರು ರಾಮಕೃಷ್ಣ ಆಶ್ರಮದ ವಿನಯಕನಂದಾಜಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಕಳ ನಿರ್ದೇಶಕ ಭಾಸ್ಕರ್ , ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹ ನಿರ್ದೇಶಕಿ ಪೂರ್ಣಿಮಾ , ಉದ್ಯಮಿ ಸತೀಶ್ ಪೈ, ರವೀಂದ್ರ ಕುಮಾರ್ ಸ್ವಾಗತಿಸಿದರು.