News Karnataka Kannada
Sunday, April 28 2024
ಮಡಿಕೇರಿ

ವಿರಾಜಪೇಟೆ: ಕೇರಳದವರ ಕಸದ ತೊಟ್ಟಿಯಾದ ಕೊಡಗಿನ ಪಶ್ಚಿಮ ಘಟ್ಟ

The Western Ghats in Kodagu, a garbage dump for Keralites
Photo Credit : By Author

ವಿರಾಜಪೇಟೆ: ಪಟ್ಟಣ ದಿಂದ ಕೇರಳಕ್ಕೆ ಹೋಗುವ ರಾಜ್ಯ ಹೆದ್ದಾರಿಯ 6 ಕಿಲೋಮೀಟರ್ ನಂತರ ಬಲ ಬದಿಯಲ್ಲಿ ಮಾಕುಟ್ಟ ಕೆರಟ್ಟಿ ಮೀಸಲು ಅರಣ್ಯ ಹಾಗೂ ಎಡ ಬಧಿಯಲ್ಲಿ ಬ್ರಹ್ಮಗಿರಿ ವನ್ಯ ಜೀವಿ ವಲಯಕ್ಕೆ ಸೇರಿದ ಉರ್ಟಿ ಅರಣ್ಯ ಆರ್ಜಿ, ಬೇಟೋಳಿ, ಹೆಗ್ಗಳ, ನಾಂಗಾಲ ಗ್ರಾಮದ ಮೂಲಕ 22ಕಿ. ಮೀ ಪ್ರಯಾಣ ಮಾಡಿದರೆ ಕೇರಳ ಗಡಿ ಕೊಟು ಹೊಳೆ ತಲುಪುತ್ತದೆ.

ವಿನಾಸಾದ ಅಂಚಿನಲ್ಲಿ ಇರುವ ಚಿಪ್ಪು ಹಂದಿಗಳು, ಕಾಡು ಪಾಪ, ಸೀಳು ನಾಯಿಗಳ ಅವಾಸಸ್ಥಾನ ವಾಗಿದೆ. ರಸ್ತೆಯ ಎರಡು ಬದಿಯಲ್ಲಿ ಅರಣ್ಯದ ಒಳಗೆ ನೋಡಿದರೆ ಮನ ಕಲುಕುವ ದೃಶ್ಯ ಕಂಡು ಬರುತಿದೆ ಕೇರಳದಿಂದ ವಾಹನಗಳಲ್ಲಿ ತಂದು ಉರಟ್ಟಿ ಮತ್ತು ಕೆರಟ್ಟಿ ಅರಣ್ಯದಲ್ಲಿ ಕಸ, ಬೀರು ಬಾಟಲಿ, ಆಸ್ಪತ್ರೆ ತ್ಯಾಜ್ಯ ಪ್ಲಾಸ್ಟಿಕ್ ಸುರಿದು ಹೋಗುತಾರೆ.

ಮಾಕುಟ್ಟ ದಲ್ಲಿ ಅರಣ್ಯ ಚೆಕ್ ಪೋಸ್ಟ್ ಇದ್ದರು ಯಾವುದೇ ಪ್ರಯೋಜನವಿಲ್ಲ. ಎರಡು ಅರಣ್ಯ ಅಧಿಕಾರಿಗಳ ಕಛೇರಿ ಇದ್ದು ಮತ್ತು ಅಧಿಕಾರಿ ಗಳು ಇದೆ ಮಾರ್ಗ ದಲ್ಲಿ ಪ್ರತಿ ದಿನ ಇಲಾಖೆಯ ವಾಹನದಲ್ಲಿ ಹಾದು ಹೋದರು ಕಸವನ್ನು ಕಂಡರೂ ತೆರವು ನಡೆಸುತಿಲ್ಲ ಮತ್ತು ವಾಹನದಿಂದ ಕೆಳಗೆ ಇಳಿದು ಅರಣ್ಯದ ಒಳಗೆ ನಾಲ್ಕು ಹೆಜ್ಜೆ ಇಡುತಿಲ್ಲ ಅಧಿಕಾರಿ ಗಳ ನಿರ್ಲಕ್ಷ ಕೇರಳ ದಿಂದ ತಂದು ಅರಣ್ಯಕ್ಕೆ ಕಸ ಸುರಿದು ಹೋಗುವವರಿಗೆ ವರದಾನವಾಗಿದೆ.

ಮೇಲಧಿಕಾರಿಗಳು ಕೊಡಲೇ ಕೆರಟ್ಟಿ ಮತ್ತು ಊರಟ್ಟಿ ಅರಣ್ಯಕೆ ಖುದ್ದು ಭೇಟಿ ನೀಡಿ ಸಮಸ್ಯೆ ಯನ್ನು ಪರಿಶಿ ಲನೇ ಮಾಡಿ ಕ್ರಮ ಕೈಗೊಳ್ಳದೆ ಇದ್ದರೆ ಈ ಅರಣ್ಯ ದಲ್ಲಿ ಇರುವ ಅಪರೂಪದ ವನ್ಯ ಜೀವಿ ಗಳ ಮತ್ತು ಆನೆ, ಹುಲಿ, ಮಂಗ, ಕರಡಿ, ಕಾಡುಕೋಣ ಮತ್ತು ಇನ್ನಿತರ ವನ್ಯ ಸಂಪತ್ತುಗಳ ನಾಶಕ್ಕೆ ಕಾರಣವಾಗುತ್ತೆ.

ಅದರಿಂದ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿಗಳು ಈ ಎರಡು ಅರಣ್ಯ ವನ್ನು ಉಳಿಸಲು ಅಲ್ಲಿನ ಅಧಿಕಾರಿ ಗಳಿಗೆ ತರಬೇತಿ ನೀಡಿ ತಪ್ಪಿತಸ್ಥ ರ ವಿರುದ್ಧ ಕ್ರಮ ಗೊಳ್ಳಲು ಮತ್ತು ಮುಂದೆ ಈ ರೀತಿಯ ಕೃತ್ಯ ಮರು ಕಳಿಸದಂತೆ ಕ್ರಮ ಕೈಗೊಳ್ಳುವಂತೆ ಪರಿಸರ ಪ್ರೇಮಿಗಳು ಅಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು