News Karnataka Kannada
Saturday, April 27 2024
ಕರಾವಳಿ

 ನಾಮಪತ್ರ ಸಲ್ಲಿಸಿದ ಡಾ. ವೈ.ಭರತ್ ಶೆಟ್ಟಿ-ಮೆರವಣಿಗೆಯಲ್ಲಿ ಜನಸ್ತೋಮ

Bharat Shetty New
Photo Credit : News Kannada

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಅಭ್ಯರ್ಥಿ ಡಾ.ವೈ.ಭರತ್ ಶೆಟ್ಟಿಯವರು ಮಂಗಳವಾರ ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಅದಕ್ಕಿಂತಲೂ ಮೊದಲು ಭಾರೀ ಜನಸ್ತೋಮದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಶಕ್ತಿ
ಪ್ರದರ್ಶನ ಮಾಡಿದರು. ಬೆಳಗ್ಗೆ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ
ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಭರತ್‌ ಶೆಟ್ಟಿಯವರು ತೆರೆದ ವಾಹನದಲ್ಲಿ ಕಾವೂರು ಮೈದಾನಕ್ಕೆ ಸಾಗಿದರು.

ಈ ಸಂದರ್ಭ ಮಾರ್ಗದುದ್ದಕ್ಕೂ ಕೇಸರಿ ಕಲರವ ಕಾಣಿಸಿತು. ಸಾವಿರಾರು ಮಂದಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ, ಬಿಜೆಪಿ ಬಾವುಟ ಹಾರಿಸಿ ಡಾ.ವೈ.ಭರತ್ ಶೆಟ್ಟಿಯವರಿಗೆ ಸ್ವಾಗತಕೋರಿದರು. ಕಾವೂರು ಮೈದಾನದಲ್ಲಿ ಸಾಂಕೇತಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರಂದರದಾಸ್ ಕೂಳೂರು, ಮಾಜಿ ಕಾರ್ಪೊರೇಟರ್ ಅಶೋಕ್ ಶೆಟ್ಟಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಕೊಂಡರು. ಆ ಬಳಿಕ ಭರತ್‌ ಶೆಟ್ಟಿಯವರು ನಾಮಪತ್ರ ಸಲ್ಲಿಸಲು ಮಿನಿವಿಧಾನಸೌಧದಲ್ಲಿರುವ ಚುನಾವಣಾ ಕಚೇರಿಗೆ ಆಗಮಿಸಿದರು. ಈ ಬಗ್ಗೆ ಮಾತನಾಡಿದ ಡಾ.ವೈ.ಭರತ್ ಶೆಟ್ಟಿ, ಕಳೆದ ಐದು ವರ್ಷಗಳಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಹಾಗೂ ಹಿಂದುತ್ವದ ಕೆಲಸ ಎರಡೂ ಕಾರ್ಯಗಳನ್ನು ಪೂರೈಸಿದ್ದೇನೆ. ಈ ಮೂಲಕ ಕಾರ್ಯಕರ್ತರ ಆಕಾಂಕ್ಷೆ ಈಡೇರಿಸಿದ್ದೇನೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ನನ್ನ ವಿರುದ್ಧವಾಗಿ ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದ್ದರೂ ಬಿಜೆಪಿ ಎದುರಿಸಲು ತಯಾರಿದ್ದು, ನಾವು ಬಹುಮತದೊಂದಿಗೆ ಗೆದ್ದು ಬರುತ್ತೇವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು