ಹುಬ್ಬಳ್ಳಿ: ಬಿಜೆಪಿಯಲ್ಲಿ ಪಕ್ಷ ಮುಖ್ಯ. ವ್ಯಕ್ತಿ ಮುಖ್ಯ ಅಲ್ಲ ಎಂಬುದು ಬಿಜೆಪಿಯ ಹಳೆಯ ನಿಲುವು . ಆದರೆ ಈಗ ಬಿಜೆಪಿಯಲ್ಲಿ ಬಿ.ಎಲ್ . ಸಂತೋಷ ಎಂಬ ವ್ಯಕ್ತಿ ಮುಖ್ಯವಾಗಿದ್ದಾರೆ. ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಯಲ್ಲ ಪಕ್ಷ ಮುಖ್ಯ ಅನ್ನು ವುದು ನಾನು ಹುಬ್ಬಳ್ಳಿ ಧಾರವಾಡ ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ಪ್ರವಾಸ ಮಾಡಿದಾಗ ಹೇಳುತ್ತಿದ್ದೆ. ಆದರೆ ಇವರಿಗೆ ಪಕ್ಷ ಮುಖ್ಯವಲ್ಲ. ವ್ಯಕ್ತಿ ಮುಖ್ಯವಾಗಿದ್ದಾರೆ. ಅದರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದೇವೆ. ಕೆಲವೊಂದು ವ್ಯಕ್ತಿಗಳು ಬಿಜೆಪಿಯನ್ನು ಕಪಿ ಮುಷ್ಟಿ ಯಲ್ಲಿ ಇಟ್ಟು ಕೊಂಡಿದ್ದಾರೆ ಎಂದು ಆರೋಪಿಸಿದರು.